Advertisement

ಮಾಧ್ಯಮದ ಕಣ್ತಪ್ಪಿಸಿ ಬಂದ ಶಿವಸೇನೆಯ ಬಂಡಾಯ ಶಾಸಕರು

01:24 PM Jun 30, 2022 | Team Udayavani |

ಪಣಜಿ: ಮಹಾರಾಷ್ಟ್ರ ರಾಜಕೀಯದಲ್ಲಿ ಸಂಚಲನ ಮೂಡಿಸಿರುವ ಶಿವಸೇನೆಯ 39 ಜನ ಬಂಡಾಯ ಶಾಸಕರು ಬುಧವಾರ ರಾತ್ರಿ ಗೋವಾಕ್ಕೆ ಆಗಮಿಸಿದ್ದಾರೆ. ಆದರೆ ದಾಬೋಲಿಂ ವಿಮಾನ ನಿಲ್ದಾಣದಿಂದ ಇಲ್ಲಿನ ತಾಜ್ ಹೊಟೇಲ್‍ಗೆ ಆಗಮಿಸುವಾಗ ಮಾಧ್ಯಮಗಳ ಕಣ್ಣು ತಪ್ಪಿಸಲು ಕಾರ್ಗೊ ಗೇಟ್ ಮೂಲಕ ತೆರಳಿದ್ದಾರೆ.

Advertisement

ದಾಬೋಲಿಂ ವಿಮಾನ ನಿಲ್ದಾಣದ ಹೊರಗೆ 30ಕ್ಕೂ ಹೆಚ್ಚು ರಾಷ್ಟ್ರೀಯ ಹಾಗೂ ಸ್ಥಳೀಯ ಮಾಧ್ಯಮ ವರದಿಗಾರರು ಬುಧವಾರ ಮಧ್ಯಾಹ್ನದಿಂದಲೇ ವಿಮಾನ ನಿಲ್ದಾಣದ ಹೊರ ಭಾಗದಲ್ಲಿ ಕಾಯುತ್ತಿದ್ದರು. ಆದರೆ ತಡ ರಾತ್ರಿಗೆ ಆಗಮಿಸಿದ ಈ ಬಂಡಾಯ ಶಾಸಕರನ್ನು ಭೇಟಿ ಮಾಡಲು ಮಾಧ್ಯಮಗಳಿಂದ ಸಾಧ್ಯವಾಗಲಿಲ್ಲ.

ಈ ಬಂಡಾಯ ಶಾಸಕರು ಪಣಜಿ ಸಮೀಪದ ದೋನಾಪಾವುಲ್‍ನ ತಾಜ್ ರೆಸಾರ್ಟಗೆ ಬಂದಿಳಿದಿದ್ದಾರೆ. ಶಾಸಕರಿಗಾಗಿ 74 ಕೊಠಡಿಗಳನ್ನು ಕಾಯ್ದಿರಿಸಲಾಗಿತ್ತು. ಇವರು ಮೊದಲು ಗುಜರಾತ್‍ಗೆ ತೆರಳಿದ್ದು, ಬಳಿಕ ಗುವಾಟಿ, ಗೋವಾಕ್ಕೆ ಆಗಮಿಸಿದ್ದಾರೆ. ಬಿಜೆಪಿ ಆಡಳಿತವಿರುವ ಈ ಮೂರು ರಾಜ್ಯಗಳಲ್ಲಿ ಬಂಡಾಯ ಶಾಸಕರು ವಾಸ್ತವ್ಯ ಹೂಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next