Advertisement

ಮತ್ತೆ ಕದನ ವಿರಾಮ ಉಲ್ಲಂಘಿಸಿದ ಪಾಕ್: ಭಾರತೀಯ ಸೇನೆಯಿಂದ ತಕ್ಕ ಪ್ರತ್ತುತ್ತರ

09:42 AM Oct 03, 2019 | Team Udayavani |

ಶ್ರೀನಗರ: ಜಮ್ಮು–ಕಾಶ್ಮೀರದ ಕೆರಾನ್ ಸೆಕ್ಟರ್ ನಲ್ಲಿ  ಪಾಕಿಸ್ಥಾನ ಇಂದು ಬೆಳಗ್ಗೆ ಮತ್ತೆ ಕದನ ವಿರಾಮ ಉಲ್ಲಂಘಿಸಿದ್ದು ಭಾರೀ ಗುಂಡಿನ ದಾಳಿ ನಡೆಸಿದೆ.

Advertisement

ಪಾಕಿಸ್ಥಾನ ಸೇನೆಯ ಅಪ್ರಚೋದಿತ ಗುಂಡಿನ ದಾಳಿಗೆ ಭಾರತೀಯ ಸೇನೆ ತಕ್ಕ ಪ್ರತ್ಯುತ್ತರ ನೀಡುತ್ತಿದೆ.

ಕಳೆದ ಮೂರು ದಿನಗಳಲ್ಲಿ ಪಾಕ್ ಮೂರನೇ ಬಾರಿಗೆ ಕದನ ವಿರಾಮ ಉಲ್ಲಂಘಿಸುತ್ತಿದ್ದು, ಈ ಹಿಂದೆ ಪೂಂಚ್ ಜಿಲ್ಲೆಯ ಮೆಂಧಾರ್ ಮತ್ತು ಬಾಲಾಕೋಟ್ ಗಡಿ ನಿಯಂತ್ರಣ ರೇಖೆಯ ಬಳಿ ಫೈರಿಂಗ್ ನಡೆಸಿತ್ತು. ಅಪ್ರಚೋದಿತ ಗುಂಡಿನ ದಾಳಿಯಿಂದಾಗಿ ಮೂವರು ಮಹಿಳೆಯರು ಸೇರಿದಂತೆ ನಾಲ್ವರು ನಾಗರಿಕರು ಗಾಯಗೊಂಡಿದ್ದಾರೆ.  ಏತನ್ಮಧ್ಯೆ ಶಹಪುರ್ ಮತ್ತು ಕಿರ್ನಿ ವಲಯಗಳಲ್ಲೂ ಕೂಡ ಪಾಕ್ ಶನಿವಾರ ನಡೆಸಿದ  ಫೈರಿಂಗ್ ಗೆ ಹಲವರು ಗಾಯಗೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next