Advertisement
ಅಂತಾರಾಷ್ಟ್ರೀಯ ಗಡಿಯುದ್ದಕ್ಕೂ ಸತತ 4ನೇ ದಿನ ಪಾಕಿಸ್ತಾನವು ಗುಂಡಿನ ದಾಳಿ ನಡೆಸಿದೆ. ಹೀಗಾಗಿ, ಗಡಿ ಗ್ರಾಮದ ಜನರು ಭೀತಿಯಿಂದ ಕಾಲಕಳೆಯಬೇಕಾಗಿದೆ. ಈ ಕುರಿತು ಮಾತನಾಡಿರುವ ಬಿಎಸ್ಎಫ್ ಐಜಿ ರಾಮ್ ಅವತಾರ್, “ಪರಿಸ್ಥಿತಿ ಪ್ರಕ್ಷುಬ್ಧವಾಗಿದೆ. ನಮ್ಮ ಸೇನೆಯೂ ಪಾಕಿಸ್ತಾನಕ್ಕೆ ಪ್ರತ್ಯುತ್ತರ ನೀಡುತ್ತಿದೆ. ಆ ಭಾಗದಲ್ಲೂ ಭಾರೀ ಹಾನಿ ಉಂಟುಮಾಡ ಲಾಗಿದೆ’ ಎಂದು ಹೇಳಿದ್ದಾರೆ. ಪಾಕ್ನ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ಯೋಧ 28 ವರ್ಷದ ಸೀತಾರಾಂ ಉಪಾಧ್ಯಾಯ ಅವರು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆಯೇ ಕೊನೆಯುಸಿರೆಳೆದಿದ್ದಾರೆ. ಇವರು ಜಾರ್ಖಂಡ್ನವರಾಗಿದ್ದು, 2011ರಲ್ಲಿ ಸೇನೆಗೆ ಸೇರಿದ್ದರು.
ಮೆಹಬೂಬಾ ಮುಫ್ತಿ, ಜಮ್ಮು-ಕಾಶ್ಮೀರ ಸಿಎಂ