Advertisement

ಪಾಕ್‌ ಶೆಲ್‌ ದಾಳಿ: ಐವರ ಸಾವು

06:00 AM May 19, 2018 | Team Udayavani |

ಜಮ್ಮು: ಭಾರತ-ಪಾಕ್‌ ಗಡಿಯಲ್ಲಿ ಮತ್ತೆ ಗುಂಡಿನ ಮೊರೆತ ಆರಂಭವಾಗಿದೆ. ಶುಕ್ರವಾರ ಜಮ್ಮುವಿನ ಗಡಿ ಠಾಣೆಗಳು ಹಾಗೂ ಗ್ರಾಮಗಳನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನಿ ಸೇನಾಪಡೆ ಶೆಲ್‌ ದಾಳಿ ನಡೆಸಿದ್ದು, ಪರಿಣಾಮ ಒಬ್ಬ ಯೋಧ ಹುತಾತ್ಮನಾದರೆ, ನಾಲ್ವರು ನಾಗರಿಕರೂ ಮೃತಪಟ್ಟಿದ್ದಾರೆ. ಘಟನೆಯಲ್ಲಿ 12 ಮಂದಿ ಗಾಯಗೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಜಮ್ಮು-ಕಾಶ್ಮೀರಕ್ಕೆ ಭೇಟಿ ನೀಡುವ ಮುನ್ನಾ ದಿನವೇ ಈ ಗುಂಡಿನ ಚಕಮಕಿ ನಡೆದಿದೆ.

Advertisement

ಅಂತಾರಾಷ್ಟ್ರೀಯ ಗಡಿಯುದ್ದಕ್ಕೂ ಸತತ 4ನೇ ದಿನ ಪಾಕಿಸ್ತಾನವು ಗುಂಡಿನ ದಾಳಿ ನಡೆಸಿದೆ. ಹೀಗಾಗಿ, ಗಡಿ ಗ್ರಾಮದ ಜನರು ಭೀತಿಯಿಂದ ಕಾಲಕಳೆಯಬೇಕಾಗಿದೆ. ಈ ಕುರಿತು ಮಾತನಾಡಿರುವ ಬಿಎಸ್‌ಎಫ್ ಐಜಿ ರಾಮ್‌ ಅವತಾರ್‌, “ಪರಿಸ್ಥಿತಿ ಪ್ರಕ್ಷುಬ್ಧವಾಗಿದೆ. ನಮ್ಮ ಸೇನೆಯೂ ಪಾಕಿಸ್ತಾನಕ್ಕೆ ಪ್ರತ್ಯುತ್ತರ ನೀಡುತ್ತಿದೆ. ಆ ಭಾಗದಲ್ಲೂ ಭಾರೀ ಹಾನಿ ಉಂಟುಮಾಡ ಲಾಗಿದೆ’ ಎಂದು ಹೇಳಿದ್ದಾರೆ. ಪಾಕ್‌ನ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ಯೋಧ 28 ವರ್ಷದ ಸೀತಾರಾಂ ಉಪಾಧ್ಯಾಯ ಅವರು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆಯೇ ಕೊನೆಯುಸಿರೆಳೆದಿದ್ದಾರೆ. ಇವರು ಜಾರ್ಖಂಡ್‌ನ‌ವರಾಗಿದ್ದು, 2011ರಲ್ಲಿ ಸೇನೆಗೆ ಸೇರಿದ್ದರು.

ನಮ್ಮ ದೇಶವು ಶಾಂತಿ ಸ್ಥಾಪಿಸುವ ನಿಟ್ಟಿನಲ್ಲಿ ಹೆಜ್ಜೆಯಿಟ್ಟಿದ್ದರೆ, ಪಾಕಿಸ್ತಾ ನವು ಗುಂಡಿನ ದಾಳಿ ನಡೆಸುವ ಮೂಲಕ ಈ ಪವಿತ್ರ ರಂಜಾನ್‌ ಮಾಸದ ಮೇಲೆಯೂ ಗೌರವ ತೋರಿಸಿಲ್ಲ.
ಮೆಹಬೂಬಾ ಮುಫ್ತಿ, ಜಮ್ಮು-ಕಾಶ್ಮೀರ ಸಿಎಂ

Advertisement

Udayavani is now on Telegram. Click here to join our channel and stay updated with the latest news.

Next