Advertisement

ಪ್ರವಾಹ ಭೀತಿಯಲ್ಲಿ ಪಂಜಾಬ್‌

01:00 AM Aug 26, 2019 | Team Udayavani |

ನವದೆಹಲಿ: ಸಟ್ಲೆಜ್‌ ನದಿಯಲ್ಲಿನ ನೀರಿನ ಪ್ರಮಾಣ ಹೆಚ್ಚಾಗಿರುವ ಪರಿಣಾಮ, ಪಾಕಿಸ್ತಾನವು ಭಾರತದ ಪಂಜಾಬ್‌ಗ ಹತ್ತಿರವಿರುವ ತನ್ನ ಗಡಿಯೊಳಗಿನ ಅಣೆಕಟ್ಟಿನಿಂದ ಅಪಾರ ಪ್ರಮಾಣದ ನೀರನ್ನು ಹರಿಬಿಟ್ಟಿದೆ. ಇದರ ಪರಿಣಾಮ, ಪ್ರವಾಹದ ಮೊದಲ ಭೀತಿ ಗಡಿಯಲ್ಲಿನ ತೆಂಡಿವಾಲಾಕ್ಕೆ ಆವರಿಸಿದೆ. ಫಿರೋಜ್‌ಪುರ ಮಾತ್ರವಲ್ಲದೆ, ಜಲಂಧರ್‌, ಕಪುರ್ತಲಾ ಹಾಗೂ ರೂಪ್‌ನಗರ ಜಿಲ್ಲೆಗಳೂ ಪ್ರವಾಹಕ್ಕೆ ತುತ್ತಾಗುವ ಸಾಧ್ಯತೆಗಳಿವೆ ಎಂದು ಭಾರತದ ಪಂಜಾಬ್‌ ರಾಜ್ಯ ಸರ್ಕಾರದ ವಕ್ತಾರರು ತಿಳಿಸಿದ್ದಾರೆ.

Advertisement

ಫಿರೋಜ್‌ಪುರ ಜಿಲ್ಲಾಡಳಿತವು ಮುನ್ನೆಚ್ಚರಿಕೆ ಕ್ರಮವಾಗಿ ನದಿ ಪಾತ್ರದ ಎಲ್ಲಾ ಹಳ್ಳಿಗಳ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಪ್ರಕಟಣೆ ಹೊರಡಿಸಿದೆ. ಪ್ರವಾಹ ಭೀತಿಯಿರುವ ಪ್ರದೇಶಗಳಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಹಾಗೂ ಇತರ ಸೇನಾ ತುಕಡಿಗಳನ್ನು ನಿಯೋಜಿಸಲಾಗಿದೆ. ಸದ್ಯಕ್ಕೆ ಯಾವುದೇ ಅಪಾಯವಿಲ್ಲ. ಆದರೆ ಪಾಕಿಸ್ತಾನ ಇನ್ನೂ ನೀರು ಬಿಡುಗಡೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.

ದೆಹಲಿಯಲ್ಲಿ ಮಳೆ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 2.4 ಮಿ.ಮೀನಷ್ಟು ಮಳೆಯಾಗಿದೆ. ದಿನದ ಉಷ್ಣಾಂಶ 26.8 ಡಿಗ್ರಿ ಸೆಲ್ಸಿಯಸ್‌ನಷ್ಟಿದ್ದು, ವಾತಾವರಣದಲ್ಲಿ ಶೇ. 97ರಷ್ಟು ತೇವಾಂಶವಿತ್ತು ಎಂದು ಹವಾಮಾನ ಇಲಾಖೆ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next