Advertisement

ಯುದ್ದೋನ್ಮತ್ತ ಪಾಕ್: ಕ್ಷಿಪಣಿ ಪರೀಕ್ಷೆ ಮಾಡಲಿರುವ ನೆರೆ ರಾಷ್ಟ್ರ

09:51 AM Aug 30, 2019 | Team Udayavani |

ಇಸ್ಲಮಾಬಾದ್: ಜಮ್ಮು- ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದಾದ ನಂತರ ಕೆಂಡಾಮಂಡಲವಾಗಿರುವ ನೆರೆರಾಷ್ಟ್ರ ಪಾಕಿಸ್ಥಾನ ಯುದ್ದಕ್ಕೆ ಸಜ್ಜಾದಂತಿದೆ. ಪದೇ ಪದೇ ಯುದ್ದದ ಬಗ್ಗೆ ಮಾತಾಡುತ್ತಿರುವ ಪಾಕ್ ಈಗ ಒಂದು ಹೆಜ್ಜೆ ಮುಂದು ಹೋಗಿದ್ದು, ಕ್ಷಿಪಣಿ ಪರೀಕ್ಷೆ ಮಾಡಲು ತಯಾರಿ ನಡೆಸಿದೆ.

Advertisement

ಕರಾಚಿಯ ಸೋನ್ಮೈನಿ ಬಳಿ ಪಾಕ್ ಈ ಕ್ಷಿಪಣಿ ಪರೀಕ್ಷೆ ನಡೆಸಲು ಸಿದ್ದತೆ ನಡೆಸಿದೆ ಎಂದು ಮೂಲಗಳು ವರದಿ ಮಾಡಿದೆ. ಇದೇ ಕಾರಣದಿಂದಾಗಿ ಕರಾಚಿ ಮೂಲಕ ಸಂಚರಿಸುವ ಭಾರತೀಯ ವಿಮಾನಗಳ ಮೂರು ವಾಯು ಮಾರ್ಗವನ್ನು ನಿರ್ಬಂಧಿಸಲಾಗಿದೆ. ಆಗಸ್ಟ್ 28ರಂದು ಜಾರಿಯಾಗಿರುವ ಈ ನಿರ್ಬಂಧ ಆಗಸ್ಟ್ 31ರವರೆಗೆ ಮುಂದುವರಿಯಲಿದೆ. ಕೇವಲ ನಾಲ್ಕು ದಿನಗಳಿಗೆ ವಾಯು ಮಾರ್ಗ ನಿರ್ಬಂಧ ವಿಧಿಸಿರುವ ಪಾಕ್ ನ ಈ ನಡೆ ಅನುಮಾನಕ್ಕೆ ಕಾರಣವಾಗಿತ್ತು. ಈ ನಾಲ್ಕು ದಿನಗಳಲ್ಲೇ ಪಾಕಿಸ್ಥಾನ ಕ್ಷಿಪಣಿ ಪರೀಕ್ಷೆ ನಡೆಸಲಿದೆ ಎಂದು ವರದಿಯಾಗಿದೆ.

ಪಾಕಿಸ್ಥಾನದ ರೈಲ್ವೇ ಸಚಿವ ಶೇಖ್ ರಶೀದ್ ಅಹ್ಮದ್ ಭಾರತ – ಪಾಕ್ ಯುದ್ದ ಸಂಭವನೆಯ ಬಗ್ಗೆ ಮಾತಾಡಿದ್ದು, ಅಕ್ಟೋಬರ್ ಅಥವಾ ನವೆಂಬರ್ ನಲ್ಲಿ ಉಭಯ ದೇಶಗಳ ನಡುವೆ ಯುದ್ದ ನಡೆಯಲಿದೆ ಎಂದು ಹೇಳಿಕೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next