Advertisement

ಯುಪಿ ಫಲಿತಾಂಶ ಪಾಕ್, ಬಾಂಗ್ಲಾದೇಶಕ್ಕೆ ನಡುಕ ಹುಟ್ಟಿಸಲು ಕಾರಣವೇನು?

03:33 PM Mar 12, 2017 | Team Udayavani |

ನವದೆಹಲಿ:ಉತ್ತರಪ್ರದೇಶ ಚುನಾವಣೆಯ ಫಲಿತಾಂಶದಿಂದಾಗಿ ಮುಂದಿನ ದಿನಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕೈಗೊಳ್ಳಲಿರುವ ನೀತಿ, ನಿಲುವು ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ಸರ್ಕಾರದ ಮೇಲೆ ಪರಿಣಾಮ ಬೀರಲಿದೆಯೇ ಎಂಬ ಪ್ರಶ್ನೆ ಮೂಡುತ್ತಿರುವುದಾಗಿ ಮಾಧ್ಯಮದ ವರದಿಗಳು ತಿಳಿಸಿವೆ. ಅದಕ್ಕೆ ಕಾರಣ ಕೆಲವು ಊಹಾಪೋಹಗಳ ಪ್ರಕಾರ ಕೇಂದ್ರ ಸರ್ಕಾರ ಕಠಿಣ ನಿರ್ಧಾರ ಕೈಗೊಳ್ಳಲು ಉತ್ತರಪ್ರದೇಶ ಚುನಾವಣೆಗಾಗಿ ಕಾಯುತ್ತಿತ್ತು ಎಂಬುದು!

Advertisement

ಉರಿ ದಾಳಿ ನಂತರ ಭಾರತ ಮತ್ತು ಪಾಕಿಸ್ತಾನ ನಡುವಿನ ದ್ವಿಪಕ್ಷೀಯ ಸಂಬಂಧ ತೀರ ಹದಗೆಟ್ಟಿತ್ತು. ಅಲ್ಲದೇ ಭಾರತೀಯ ಸೇನೆ ದಿಢೀರ್ ಆಗಿ ಪಿಒಕೆಗೆ ನುಗ್ಗಿ ಸರ್ಜಿಕಲ್ ದಾಳಿ ನಡೆಸುವ ಮೂಲಕ ಜಾಗತಿಕ ಮಟ್ಟದಲ್ಲಿ ಸುದ್ದಿಯ ಅಲೆ ಎಬ್ಬಿಸಿತ್ತು. ಇದೀಗ ಪಂಚರಾಜ್ಯಗಳ ಚುನಾವಣೆಯಲ್ಲಿ ದೇಶದ ಬಹುದೊಡ್ಡ ರಾಜ್ಯವಾಗಿರುವ ಉತ್ತರಪ್ರದೇಶದಲ್ಲಿ ಬಿಜೆಪಿ ಭರ್ಜರಿ ಜಯಬೇರಿ ಬಾರಿಸಿದೆ. ಜೊತೆಗೆ ವಿಪಕ್ಷಗಳು ಧೂಳೀಪಟವಾಗಿದೆ.

ಉತ್ತರಪ್ರದೇಶದ ಐತಿಹಾಸಿಕ ಗೆಲುವು  ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮತ್ತಷ್ಟು ಬಲ ತಂದಿದ್ದು, ವಿದೇಶಾಂಗ ನೀತಿಗಳಿಗೆ ಸಂಬಂಧಿಸಿದಂತೆ ಕಠಿಣ ನಿರ್ಧಾರ ಕೈಗೊಳ್ಳುವುದಕ್ಕೆ ಸಹಕಾರಿಯಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. 

Advertisement

Udayavani is now on Telegram. Click here to join our channel and stay updated with the latest news.

Next