Advertisement

ಕಾರ್ಯಕ್ರಮ ನೀಡುತ್ತಿರುವಾಗಲೇ ಕುಸಿದು ಬಿದ್ದು ಮೃತಪಟ್ಟ ಜನಪ್ರಿಯ ಮದ್ದಳೆ ವಾದಕ

12:28 PM Feb 07, 2023 | Team Udayavani |

ಲಕ್ನೋ: ವೇದಿಕೆಯಲ್ಲಿ ಕಾರ್ಯಕ್ರಮ ನೀಡುತ್ತಿರುವಾಗಲೇ ಜನಪ್ರಿಯ ಮದ್ದಳೆ ವಾದಕರೊಬ್ಬರು ಕುಸಿದು ಬಿದ್ದು ಮೃತಪಟ್ಟ ಘಟನೆ ಉತ್ತರ ಪ್ರದೇಶದ ಲಕ್ನೋದಲ್ಲಿ ಸೋಮವಾರ ( ಫೆ.6 ರಂದು) ನಡೆದಿದೆ.

Advertisement

ಹೆಸರಾಂತ ಮದ್ದಳೆ ವಾದಕ ದಿನೇಶ್‌ ಪ್ರಸಾದ್‌ ಮಿಶ್ರಾ (68) ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಸೋಮವಾರ ಸಫೇದ್ ಬರದರಿಯಲ್ಲಿ ಮಹೀಂದ್ರ ಸಂತಕಡ ಉತ್ಸವದಲ್ಲಿ ಕಾರ್ಯಕ್ರಮ ನೀಡುತ್ತಿರುವ ವೇಳೆ ಮದ್ದಳೆ ಬಾರಿಸುತ್ತಿರುವ ಸಂದರ್ಭದಲ್ಲೇ ದಿನೇಶ್‌ ಪ್ರಸಾದ್‌ ಅವರು ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದರೂ, ಅದಾಗಲೇ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.

ದಿನೇಶ್‌ ಪ್ರಸಾದ್‌ ಮಥುರಾ ಮೂಲದವರಾಗಿದ್ದು, ಅವರ ಅಂತಿಮ ವಿಧಿ ವಿಧಾನ ಆಲಂಬಾಗ್ ನಲ್ಲಿ ನಡೆಯಲಿದೆ ಎಂದು ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next