Advertisement

Pakistan ಜಿಂದಾಬಾದ್ ಅಂದವರನ್ನು ಡಿಶ್ಯುಂ ಡಿಶ್ಯುಂ ಎಂದು ಶೂಟ್ ಮಾಡಬೇಕು: ಜಮೀರ್

07:05 PM May 03, 2024 | Team Udayavani |

ಸಿಂಧನೂರು: ಈಗ ಹೊಸ ಪ್ಯಾಶನ್ ಶುರುವಾಗಿದೆ. ಪಾಕಿಸ್ತಾನ್ ಜಿಂದಾಬಾದ್ ಅಂದ್ರೆ, ಅವರಿಗೆ ಗಲ್ಲು ಶಿಕ್ಷೆ, ನೇಣು ಬೇಡ. ಅಲ್ಲಿಯೇ ಅವರನ್ನು ಡಿಶ್ಯುಂ ಡಿಶ್ಯುಂ ಎಂದು ಗುಂಡಕ್ಕಿ ಕೊಲ್ಲುವ ಕಾನೂನನ್ನು ಜಾರಿಗೆ ತರಲು ನಮ್ಮ ಸರ್ಕಾರಕ್ಕೆ ಒತ್ತಾಯಿಸುತ್ತೇನೆ ಎಂದು ವಸತಿ ಸಚಿವ ಜಮೀರ್ ಆಹ್ಮದ್ ಖಾನ್ ಕಿಡಿ ಕಾರಿದ್ದಾರೆ.

Advertisement

ನಗರದ ಸತ್ಯಗಾರ್ಡನ್ ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳ್ ಪರ ಹಮ್ಮಿಕೊಂಡಿದ್ದ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಶುಕ್ರವಾರ ಮಾತನಾಡಿದರು.

ರಾಜ್ಯಸಭೆ ಸದಸ್ಯರೊಬ್ಬರ ಪ್ರಮಾಣ ವಚನ ಸಂದರ್ಭ ವಿಧಾನಸೌಧದಲ್ಲಿ ಪಾಕಿಸ್ಥಾನ್ ಜಿಂದಾಬಾದ್ ಕೂಗಿದ್ದಾರೆಂಬ ಆರೋಪ ಬಂದಿತ್ತು.‌ ರಾಯಚೂರಿನಲ್ಲಿ ರವಿ ಬೋಸರಾಜ್ ಮೆರವಣಿಗೆ ಸಂದರ್ಭವೂ ಪಾಕ್ ಜಿಂದಾಬಾದ್ ಕೂಗಿದ್ದಾರೆಂಬ ಮಾಹಿತಿ ಸಾಮಾಜಿಕ ಜಾಲತಾಣದಲ್ಲಿ ಬಂದಿವೆ. ನಾವೆಲ್ಲ ಮೊದಲು ಕನ್ನಡಿಗರು. ನಾವು ಭಾರತೀಯರು. ಈ ರೀತಿ ಯಾರಾದ್ರೂ ಕೂಗಿದ್ರೆ, ಅಲ್ಲಿಯೇ ಡಿಶ್ಯುಂ ಡಿಶ್ಯುಂ ಅಂತಾ ಶೂಟ್ ಮಾಡಿ ಸಾಯಿಸುವ ಕಾನೂನು ಜಾರಿಗೆ ತರಬೇಕು. ನಾನು ಸೇರಿದಂತೆ ಶಾಸಕ ಹಂಪನಗೌಡ ಬಾದರ್ಲಿ ಅವರು ಇದಕ್ಕಾಗಿ ಸರಕಾರವನ್ನು ಒತ್ತಾಯಿಸುತ್ತೇವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next