Advertisement
ಪ್ರತಿಪಕ್ಷಗಳು ಮಂಡಿಸಲು ಉದ್ದೇಶಿಸಿದ್ದ ಅವಿಶ್ವಾಸ ಗೊತ್ತುವಳಿ ತಿರಸ್ಕರಿಸಲು ಇಮ್ರಾನ್ ಅವರ ಕಾನೂನು ತಂಡ ಸ್ಪೀಕರ್ಗೆ ಒತ್ತಡ ಹೇರಿತ್ತು. ಆದರೆ, ಸಾಂವಿಧಾನಿಕ ಮಾರ್ಗ ಬಿಡಲು ತಯಾರಿಲ್ಲ ಮತ್ತು ಅದು ಸಾಧ್ಯವಾಗದ ಅಂಶ ವೆಂದು ಅಸಾದ್ ಕೈಸರ್ ಖಾನ್ ತಂಡಕ್ಕೆ ಮನವರಿಕೆ ಮಾಡಿದ್ದರೂ, ಫಲ ನೀಡಲಿಲ್ಲ. ಹೀಗಾಗಿಯೇ ಡೆಪ್ಯುಟಿ ಸ್ಪೀಕರ್ ರವಿವಾರ ಕಲಾಪ ನಡೆಸಲು ಆಗಮಿಸಿ ದ್ದರು ಎಂಬ ಅಂಶ ಈಗ ಬಯಲಾಗಿದೆ.
Related Articles
Advertisement
ಸಾಕ್ಷ್ಯವಿಲ್ಲ: ಅಮೆರಿಕ ಸರಕಾರ ತಮ್ಮ ಸರಕಾರ ಉರುಳಿಸಲು ಸಂಚು ರೂಪಿಸಿದೆ ಎಂದು ಮಾಜಿ ಪ್ರಧಾನಿ ಇಮ್ರಾನ್ ಆರೋಪಿಸಿದ್ದರು. ಆದರೆ, ಈ ಬಗ್ಗೆ ಮಾಹಿತಿಯಿಲ್ಲ ಅಮೆರಿಕ ಪಾಕಿಸ್ಥಾನದ ಆಂತರಿಕ ವಿಚಾರಗಳಲ್ಲಿ ಹಸ್ತಕ್ಷೇಪ ಮಾಡಿದ ಬಗ್ಗೆ ಸಾಕ್ಷ್ಯವಿಲ್ಲ ಎಂದು ಸೇನೆ ಸ್ಪಷ್ಟವಾಗಿ ಹೇಳಿದೆ.