Advertisement

ಪಾಕ್‌ಗೆ ರಾಜತಾಂತ್ರಿಕ ಸಭ್ಯತೆ ಇಲ್ಲ: ಭಾರತ ಕಿಡಿ

01:57 AM May 04, 2024 | Team Udayavani |

ವಿಶ್ವಸಂಸ್ಥೆ: ಕಾಶ್ಮೀರ, ಪೌರತ್ವ ಕಾಯ್ದೆ, ಅಯೋಧ್ಯೆ ರಾಮಮಂದಿರ ಸೇರಿ ಭಾರ ತದ ಆಂತರಿಕ ವಿಚಾರಗಳಲ್ಲಿ ಮೂಗು ತೂರಿಸಿ ಉದ್ಧಟತನ ಮೆರೆದಿರುವ, ವಿಶ್ವಸಂಸ್ಥೆಯ ಪಾಕಿಸ್ಥಾನ ರಾಯಭಾರಿ ಮುನೀರ್‌ ಅಕ್ರಮ್‌ರನ್ನು ಭಾರತ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.

Advertisement

ವಿಶ್ವಸಂಸ್ಥೆಯಲ್ಲಿ ಭಾರತದ ಖಾಯಂ ಪ್ರತಿನಿಧಿ ರುಚಿರಾ ಕಂಬೋಜ್‌, ಪಾಕ್‌ ವಿರುದ್ಧ ಚಾಟಿ ಬೀಸಿ, “ಜಗತ್ತು ಹಲವು ಸವಾಲುಗಳನ್ನು ಎದುರಿಸುತ್ತಿರುವ ಈ ಸಂದರ್ಭದಲ್ಲಿ ನಾವೆಲ್ಲರೂ ರಚನಾತ್ಮಕ ಮಾತುಕತೆಗೆ ಒತ್ತು ಕೊಟ್ಟರೆ, ವಿನಾಶಕಾರಿ ಪ್ರವೃತ್ತಿ ಹೊಂದಿರುವ ಕೆಲವರು ಸಭ್ಯತೆ ಮರೆತು ಮಾತನಾಡುತ್ತಿದ್ದಾರೆ. ಆ ದೇಶದ ನಿಯೋಗವು ಗೌರವ ಮತ್ತು ರಾಜತಾಂತ್ರಿಕತೆಯ ತಣ್ತೀವನ್ನು ಮರೆತಂತಿದೆ. ಎಲ್ಲ ವಿಚಾರಗಳಲ್ಲೂ ಅತ್ಯಂತ ಸಂಶಯಾಸ್ಪದ ಟ್ರ್ಯಾಕ್‌ ರೆಕಾರ್ಡ್‌ ಹೊಂದಿರುವ ಆ ದೇಶದ ಬಳಿ ಇಂಥದ್ದನ್ನು ನಿರೀಕ್ಷಿಸುವುದೂ ಕಷ್ಟ’ ಎಂದಿದ್ದಾರೆ.

ಇತ್ತೀಚೆಗೆ ವಿಶ್ವಸಂಸ್ಥೆಯಲ್ಲಿ ಮಾತನಾಡಿದ್ದ ಮುನೀರ್‌, ಕಾಶ್ಮೀರ, ಸಿಎಎ, ರಾಮಮಂದಿರ ಬಗ್ಗೆ ಪ್ರಸ್ತಾವಿಸಿದ್ದಲ್ಲದೇ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ “ನವಭಾರತ’ವು ಪಾಕಿಸ್ಥಾನದಲ್ಲಿ ಟಾರ್ಗೆಟೆಡ್‌ ಹತ್ಯೆಗಳನ್ನು ನಡೆಸುತ್ತಿದೆ ಎಂದೂ ಆರೋಪಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next