Advertisement

ತೀರ್ಥಗಳ ಸಂಗಮ ಪಾಜಕ

11:32 PM Jan 08, 2020 | mahesh |

ಉಡುಪಿ: ಮಧ್ವಾಚಾರ್ಯರು ಜನಿಸಿದ ಪಾಜಕದ ಸುತ್ತ ಕೆಲವು ಕಿ.ಮೀ. ಅಂತರದಲ್ಲಿ ಪರಶುತೀರ್ಥ, ಧನುಸ್ತೀರ್ಥ, ಗದಾತೀರ್ಥ, ಬಾಣ ತೀರ್ಥ ಎಂಬ ಹೆಸರಿನ ನಾಲ್ಕು ತೀರ್ಥಗಳಿವೆ. ಇವುಗಳನ್ನು ಪರಶುರಾಮ ದೇವರು ಪರಶು, ಧನುಸ್ಸು, ಗದಾ, ಬಾಣಗಳಿಂದ ನಿರ್ಮಿಸಿದರು ಎಂಬ ನಂಬಿಕೆಗಳಿವೆ. ಈ ತೀರ್ಥಗಳೂ ಪರಶು, ಧನುಸ್ಸು, ಗದೆ, ಬಾಣಗಳ ಆಕಾರದಲ್ಲಿವೆ. ಇವು ನಾಲ್ಕೂ ಬಂಡೆಗಳಲ್ಲಿರುವ ಜಲಾಶಯಗಳಾದರೆ ಮಧ್ವರು ವಾಸುದೇವನಾಗಿದ್ದಾಗ ನಿರ್ಮಿಸಿದ ವಾಸುದೇವ ತೀರ್ಥ ಸಹಜವಾದ ಜಲಾಶಯ.

Advertisement

ಯಾವುದೇ ಒಂದು ವಸ್ತು ವಿವರಣೆಗೆ ಒಳಪಡುವುದು ನೋಡುವವನ ದೃಷ್ಟಿಗೆ ಅವ ಲಂಬಿತ. ಇಲ್ಲಿ ಧಾರ್ಮಿಕ, ವೈಜ್ಞಾನಿಕ ಎರಡು ರೀತಿಯಲ್ಲಿ ವಿಶ್ಲೇಷಿಸಬಹುದು. ಧಾರ್ಮಿಕವಾಗಿ ಪಾಪಪರಿಹಾರಕ, ಪುಣ್ಯಪ್ರದ ಎನ್ನಬಹುದಾದರೆ, ವಿಜ್ಞಾನದ ಆಧಾರದಲ್ಲಿ ನೀರಿನಲ್ಲಿನ ಅಂಶಗಳನ್ನು ಸಂಶೋಧಿಸಿದರೆ ಇದರಲ್ಲಿ ರೋಗಪರಿಹಾರಕ ಗುಣವಿದೆ ಎನ್ನಬಹುದು.

ಪ್ರಾಕೃತಿಕ ಅಚ್ಚರಿ
ಈ ಜಲಾಶಯಗಳಲ್ಲಿ ಕಡು ಬೇಸಗೆಯಲ್ಲೂ ನೀರಿರುವುದು ಪ್ರಾಕೃತಿಕ ಅಚ್ಚರಿ. ಸುಮಾರು ಮೂರು ದಶಕಗಳ ಹಿಂದೆ ಪಾಜಕದಲ್ಲಿ ಗಣಿಗಾರಿಕೆ ತಲೆ ಎತ್ತಿದಾಗ ಪ್ರತಿಭಟಿಸದಿದ್ದರೆ ಈ ಅಚ್ಚರಿ ಇಂದು ಇರುತ್ತಿರಲಿಲ್ಲ. ಪೇಜಾವರ ಶ್ರೀಗಳು ಸಹಿತ ವಿವಿಧ ಪೀಠಾಧಿಪತಿಗಳು, ಚಿಂತಕರಾದ ಡಾ| ಬನ್ನಂಜೆ ಗೋವಿಂದಾಚಾರ್ಯ,ಡಾ|ಯು.ಆರ್‌. ಅನಂತಮೂರ್ತಿ, ಡಾ| ರವೀಂದ್ರನಾಥ ಶ್ಯಾನುಭಾಗ್‌ ಮತ್ತಿತರರು ಹೋರಾಟದಲ್ಲಿದ್ದರು.

ಬಾಣತೀರ್ಥ
ಪರಶುರಾಮ ಬೆಟ್ಟಕ್ಕೆ ಇದಿರಾಗಿ ಕುಂಜಾರು ಗಿರಿಯ ಒಂದೆಡೆ ಪರಶು ರಾಮರು ಅರ್ಧಚಂದ್ರಾಕೃತಿಯ ಬಾಣದಿಂದ ಶಿಲೆಯಲ್ಲಿ ತೀರ್ಥ ನಿರ್ಮಿಸಿದರು. ಇದುವೇ ಸರ್ವತೀರ್ಥಮಯವಾದ ಬಾಣತೀರ್ಥ. ಸ್ಕಂದ ಪುರಾಣದಲ್ಲಿ ಈ ತೀರ್ಥದ ಬಗ್ಗೆ ಉಲ್ಲೇಖವಿದೆ.

ಇದರ ತಟದಲ್ಲಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನವಿದೆ. ಇದು ಅದಮಾರು ಮಠದ ಆಡಳಿತದಲ್ಲಿದ್ದು ಇದೇ ಮಠಕ್ಕೆ ಸೇರಿದ ಇಬ್ಬರು ಸ್ವಾಮೀಜಿಯವರ ವೃಂದಾವನಗಳಿವೆ. ಮಠದ ಪರಂಪರೆಯನ್ನು ಅವಲೋಕಿಸಿದಾಗ ಮೂವರು ಸ್ವಾಮೀಜಿಯವರ ವೃಂದಾವನಗಳನ್ನು ಇಲ್ಲಿ ನಿರ್ಮಿ ಸಿದ್ದರು ಎಂದು ತಿಳಿಯುತ್ತದೆ. ಪರಂಪರೆಯಲ್ಲಿ 12ನೆಯವರಾದ ಶ್ರೀ ವೇದಗರ್ಭತೀರ್ಥರು, 13ನೆಯವರಾದ ಶ್ರೀ ಹಿರಣ್ಯಗರ್ಭತೀರ್ಥರು, 18ನೆಯವರಾದ ಶ್ರೀ ವಾದೀಂದ್ರತೀರ್ಥರು ಇಲ್ಲಿ ವೃಂದಾ ವನಸ್ಥರಾಗಿದ್ದರು ಎಂಬ ಉಲ್ಲೇಖವಿದೆ.

Advertisement

ಪರಶುತೀರ್ಥ
ಪರಶುತೀರ್ಥವು ಪಾಜಕ ಕ್ಷೇತ್ರದಿಂದ ಪೂರ್ವಕ್ಕೆ ಮೂರು ಕಿ.ಮೀ. ದೂರದಲ್ಲಿರುವ ಬೆಳ್ಳೆ ಗ್ರಾಮದ ಬಳಿಯ ಬಂಡೆಯ ಬೆಟ್ಟದ ಮಧ್ಯದಲ್ಲಿದೆ. ಇದು ಪರಶುವಿನಿಂದ ಉದ್ಭವಿಸಿದ ತೀರ್ಥ. ಇದರ ಮಗ್ಗುಲಲ್ಲಿ ಗೋಪಾಲಕೃಷ್ಣ ದೇವಸ್ಥಾನವಿದೆ. ಇದು ಬೆಳ್ಳೆ ಸಾಮಗರ ವಂಶಕ್ಕೆ ಸೇರಿದೆ.

ಧನುಸ್ತೀರ್ಥ
ಪಾಜಕದಿಂದ ದಕ್ಷಿಣಕ್ಕೆ ಸುಮಾರು 6 ಕಿ.ಮೀ. ದೂರ ದಲ್ಲಿ ದೊಡ್ಡ ಏಕಶಿಲಾ ಬ ಬೆಟ್ಟದ ಮಧ್ಯೆ ಧನುಸ್ತೀರ್ಥ ವಿದೆ. ಸುಮಾರು 50 ಅಡಿ ಎತ್ತರದ ಬಂಡೆಯಲ್ಲಿ ಜಲಾಶಯವಿ ರುವುದು ಅಚ್ಚರಿ ತರುತ್ತದೆ. ಇಲ್ಲಿ ವರ್ಷವಿಡೀ ನೀರು ಇರುವುದೂ ಇನ್ನೊಂದು ಅಚ್ಚರಿ. ಶಾಧನುಸ್ಸಿನಿಂದ ಪರಶುರಾಮ ಈ ತೀರ್ಥವನ್ನು ನಿರ್ಮಿಸಿದ ಎಂಬ ಕಥೆ ಇದೆ.

ಗದಾತೀರ್ಥ
ಕುಂಜಾರು ಗಿರಿ ಬೆಟ್ಟದ ಎದುರಿನ ಪರಶುರಾಮ ಬೆಟ್ಟದಲ್ಲಿ ಪರಶುರಾಮ ದೇವಾಲಯವಿದೆ. ಇದಕ್ಕೆ ಹೊಂದಿ ಕೊಂಡಂತೆ ಉತ್ತರದಲ್ಲಿ ಬಂಡೆಯೊಳಗೆ ಪರಶುರಾಮ ತನ್ನ ಕೌಮೋದಕೀ ಗದೆಯಿಂದ ಉದ್ಭವಿಸಿದ ತೀರ್ಥ ಗದಾತೀರ್ಥ. ಒಂದೊಂದು ತೀರ್ಥಕ್ಕೂ ವಿಭಿನ್ನ ಹಿನ್ನೆಲೆ ಇದೆ ಮತ್ತು ಪ್ರತಿ ತೀರ್ಥದ ಸ್ನಾನಕ್ಕೂ ಪ್ರತ್ಯೇಕ ಫ‌ಲಗಳಿವೆ.

ವಾಸುದೇವತೀರ್ಥ
ಮಧ್ವರು ವಾಸುದೇವನಾಗಿದ್ದಾಗ ಉಪನಯ ನವಾದ ಸಮಯ ನಾಲ್ಕೂ ತೀರ್ಥಗಳಲ್ಲಿ ಸ್ನಾನ ಮಾಡಿ ಬರುತ್ತಿದ್ದರಂತೆ. ಚಿಕ್ಕ ಮಗ ಒಬ್ಬನೇ ದೂರ ಹೋಗಿ ಸ್ನಾನ ಮಾಡಿ ಬರುವುದಕ್ಕೆ ತಾಯಿ ಆತಂಕ ವ್ಯಕ್ತಪಡಿಸಿದರು. ತಮ್ಮ ದಂಡದಿಂದ ನಾಲ್ಕೂ ತೀರ್ಥಗಳ ಸನ್ನಿಧಾನವಿರುವಂತೆ ತೀರ್ಥ ವೊಂದನ್ನು ನಿರ್ಮಿಸಿದರು. ಇದೇ ವಾಸುದೇವ ತೀರ್ಥ. ಇದು ಪಾಜಕದ ಮುಖ್ಯ ಕ್ಷೇತ್ರದ ಆವರಣದಲ್ಲಿದೆ.

Advertisement

Udayavani is now on Telegram. Click here to join our channel and stay updated with the latest news.

Next