Advertisement

ಪಡುಬಿದ್ರಿ: ವಿಳಾಸ ಕೇಳುವ ನೆಪದಲ್ಲಿ ಶಿಕ್ಷಕಿಯ ಕರಿಮಣಿ ಸರ ಸೆಳೆದು ಪರಾರಿ

12:24 AM Nov 09, 2022 | Team Udayavani |

ಪಡುಬಿದ್ರಿ: ಇನ್ನಾ ಗ್ರಾಮದ ಹೊಸಕಾಡು ಎಂಬಲ್ಲಿನ ಹಾಡಿಯ ದಾರಿಯಲ್ಲಿ ನ. 8ರಂದು ಬೆಳಗ್ಗೆ ಅಂಗನವಾಡಿ ಕೆಲಸಕ್ಕೆ ತಮ್ಮ ಸ್ಕೂಟಿಯಲ್ಲಿ ತೆರಳುತ್ತಿದ್ದ ಕುರ್ಕಿಲ್‌ಬೆಟ್ಟು ಅಂಗನವಾಡಿ ಶಿಕ್ಷಕಿ ರೇಖಾ (40) ಅವರ ಕುತ್ತಿಗೆಯಲ್ಲಿದ್ದ ಸುಮಾರು 32ಗ್ರಾಂ ತೂಕದ ಚಿನ್ನದ ಕರಿಮಣಿ ಸರವನ್ನು ವಿಳಾಸ ಕೇಳುವ ನೆಪದಲ್ಲಿ ಮೋಟಾರು ಬೈಕಲ್ಲಿ ಬಂದಿದ್ದ ಅಪರಿಚಿತರಿಬ್ಬರು ಸೆಳೆದು ಪರಾರಿಯಾಗಿದ್ದಾರೆ. ಚಿನ್ನದ ಸರದ ಮೌಲ್ಯ 1.44 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.

Advertisement

ಹೆಲ್ಮೆಟ್‌ ಧರಿಸಿದ್ದ ಮೋಟಾರು ಬೈಕ್‌ ಸವಾರ ಪೂರ್ವ ಸನ್ನದ್ಧನಾಗಿ ಬೈಕಲ್ಲಿಯೇ ಕುಳಿತಿದ್ದ. ಹಿಂಬದಿ ಸವಾರನು ರೇಖಾ ಅವರನ್ನು ನಿಲ್ಲಿಸಿ ಚೀಟಿ ತೋರಿಸಿ ವಿಳಾಸ ಕೇಳುವ ನೆಪದಲ್ಲಿ ಈ ಕೃತ್ಯವೆಸಗಿದ್ದು ಆ ಬಳಿಕ ಇಬ್ಬರೂ ಮೋಟಾರು ಬೈಕ್‌ನಲ್ಲಿಯೇ ಪರಾರಿಯಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next