Advertisement

ಪಡುಬಿದ್ರಿ : ಮದುವೆಯಾಗುವುದಾಗಿ ನಂಬಿಸಿ ಚಿನ್ನಾಭರಣ ಪಡೆದು ಮೋಸ

08:39 AM Aug 13, 2022 | Team Udayavani |

ಪಡುಬಿದ್ರಿ : ಮೂಡು ಪಲಿಮಾರು ನಿವಾಸಿ ಶೋಭಾ ಅವರ ಮನೆಗೆ ಮೇ 6ರಂದು ಬಂದಿದ್ದ ಅಪರಿಚಿತ ವ್ಯಕ್ತಿಯೊಬ್ಬ ತನ್ನನ್ನು ಹರೀಶ್‌ ಪುತ್ತೂರು ಹಾಗೂ ತಾನು ವಿಶ್ವಕರ್ಮ ಕುಲದವನೆಂದು ಪರಿಚಯಿಸಿಕೊಂಡು ಶೋಭಾ ಅವರಿಂದ 1.65 ಲಕ್ಷ ರೂ.ಗಳ ಚಿನ್ನಾಭರಣವನ್ನು ಪಡೆದು ಮೋಸ ಮಾಡಿರುವುದಾಗಿ ಪಡುಬಿದ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಆರೋಪಿಯು ಕುಂದಾಪುರದಲ್ಲಿ ಇದ್ದ ತನ್ನ 80 ಲಕ್ಷ ರೂ. ಮೌಲ್ಯದ ಜಾಗವು ಮಾರಾಟವಾಗಿದ್ದು, ಅದರ ದಾಖಲೆಗಳು ಬ್ಯಾಂಕಿನಲ್ಲಿ ಇರುವುದರಿಂದ ಅವುಗಳನ್ನು ಬಿಡಿಸಿಕೊಳ್ಳಲು ತನಗೆ ಸಹಾಯ ಮಾಡುವಂತೆ ಕೇಳಿಕೊಂಡಿದ್ದ. ಶೋಭಾ ಅವರು ತನ್ನಲ್ಲಿ ಹಣ ಇಲ್ಲವೆಂದರೂ ಅವರ ಅಕ್ಕ ಶ್ಯಾಮಲಾ ಹಾಗೂ ಶೋಭಾರನ್ನು ಆರೋಪಿಯು ನಂಬಿಸಿ, ಅಕ್ಕ ಶ್ಯಾಮಲಾ ಅವರಿಂದ 6 ಗ್ರಾಂ ತೂಕದ ಚಿನ್ನದ ಉಂಗುರ, ಶೋಭಾ ಅವರಿಂದ ಎರಡೂವರೆ ಪವನ್‌ ತೂಕದ ಪವನ್‌ ಸರ, ಒಂದೂಕಾಲು ಪವನ್‌ನ ಚಿನ್ನದ ಬೆಂಡೋಲೆ ಮತ್ತು ಜುಮ್ಕಿಯನ್ನು ತೆಗೆದುಕೊಂಡು ಹೋಗಿದ್ದ. ಚಿನ್ನದ ಹಣವನ್ನು ತನ್ನ ಜಾಗ ಮಾರಾಟ ಮಾಡಿ ಬಂದಿರುವ ಹಣದಲ್ಲಿ ಮೇ 16ರಂದು ನಿಮ್ಮ ಹಣಕ್ಕೆ ಹೆಚ್ಚುವರಿಯಾಗಿ ಹಣ ಸೇರಿಸಿ ಕೊಡುತ್ತೇನೆ ಎಂದು ಶೋಭಾ ಅವರನ್ನು ನಂಬಿಸಿದ್ದ.

ಮೋಸದ ಉದ್ದೇಶದಿಂದಲೇ ಆರೋಪಿಯು ಈ ಕೃತ್ಯವೆಸಗಿದ್ದು, ಮೇ 14ರಿಂದ ಎರಡು ದಿನ ಮನೆಯಲ್ಲೇ ಬೀಡು ಬಿಟ್ಟಿದ್ದ. ಆ ಬಳಿಕ ಹಿಂದಿರುಗಿ ಬಾರದೆ ಮೋಸ ಮಾಡಿರುವುದಾಗಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಶೋಭಾ ಅವರು ತಿಳಿಸಿದ್ದಾರೆ.

ಇದೀಗ ಪಡುಬಿದ್ರಿ ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದಾರೆ.

ಇದನ್ನೂ ಓದಿ : ಕುಷ್ಟಗಿ : ಬೆಳ್ಳಂಬೆಳಗ್ಗೆ ಡೀಸಲ್ ಟ್ಯಾಂಕರ್ ಢಿಕ್ಕಿ : ಕುರಿಗಾಹಿ ಸೇರಿ 18 ಕುರಿಗಳು ಸಾವು

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next