Advertisement

Padubidri: ಗಾಂಜಾ ಸೇವನೆ ದೃಢ: ಇಬ್ಬರ ವಿರುದ್ಧ ಪ್ರಕರಣ ದಾಖಲು

09:14 PM Jun 25, 2024 | Team Udayavani |

ಪಡುಬಿದ್ರಿ: ಉಚ್ಚಿಲದ ಬಳಿ ಜೂ. 22ರಂದು ವಶಕ್ಕೆ ಪಡೆದು ಗಾಂಜಾ ಸೇವಿಸಿದ್ದರೆಂಬ ಗುಮಾನಿ ಮೇಲೆ ಮಣಿಪಾಲ ಆಸ್ಪತ್ರೆಯ ಫೂರೆನ್ಸಿಕ್‌ ವಿಭಾಗದ ವೈದ್ಯರ ಬಳಿ ಪರೀಕ್ಷೆಗೊಳಪಡಿಸಿದಾಗ ಆರೋಪಿಗಳಾದ ಸಮಿತ್‌(22) ಹಾಗೂ ನಮಿತ್‌ ಉಚ್ಚಿಲ(23) ಗಾಂಜಾ ಸೇವಿಸಿರುವುದು ದೃಢಪಟ್ಟಿದೆ. ಈ ಕುರಿತಾಗಿ ಮಾದಕ ದ್ರವ್ಯ ವಿರೋಧಿ ಕಾಯಿದೆಯನ್ವಯ ಆರೋಪಿಗಳ ವಿರುದ್ಧ ಪಡುಬಿದ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣವು ದಾಖಲಾಗಿದ್ದು ಮುಂದಿನ ಕ್ರಮ ಕೈಗೊಳ್ಳಲಾಗಿದೆ.

Advertisement

—————————————————————-

ಗಾಂಜಾ ಸೇವನೆ: ಯುವಕ ಪೊಲೀಸ್‌ ವಶಕ್ಕೆ

ಮಂಗಳೂರು: ನಿಷೇಧಿತ ಮಾದಕ ವಸ್ತು ಗಾಂಜಾ ಸೇವನೆ ಮಾಡಿದ ನಗರದ ಗೂಡ್ಸ್‌ ಶೆಡ್‌ ರಸ್ತೆಯ ನಿವಾಸಿ ಧನರಾಜ್‌ ಶೆಟ್ಟಿ(25)ಯನ್ನು ಮಂಗಳೂರು ಬರ್ಕೆ ಠಾಣೆಯ ಪೊಲೀಸರು ಜೂ. 22ರಂದು ಬಿಜೈ ಚರ್ಚ್‌ ಬಳಿ ಸಂಜೆ ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next