Advertisement

ಪದ್ಮಾ ಸುಬ್ರಹ್ಮಣ್ಯಂ, ಕೃಷ್ಣಯಾಜಿಗೆ ಕೆರೆಮನೆ ಪ್ರಶಸ್ತಿ

10:39 PM Jan 04, 2020 | Lakshmi GovindaRaj |

ಹೊನ್ನಾವರ: ಯಕ್ಷಗಾನದ ಮೇರು ನಟರಾಗಿದ್ದ ಕೆರೆಮನೆ ಶಿವರಾಮ ಹೆಗಡೆಯವರ ಹೆಸರಿನಲ್ಲಿ ಕೊಡಮಾಡುವ ಪ್ರಶಸ್ತಿಗೆ ಲೋಕಪ್ರಸಿದ್ಧ ಭರತನಾಟ್ಯ ಕಲಾವಿದೆ ಪದ್ಮಶ್ರೀ-ಪದ್ಮ ವಿಭೂಷಣ ಪ್ರಶಸ್ತಿ ಪುರಸ್ಕೃತ ಡಾ.ಪದ್ಮಾ ಸುಬ್ರಹ್ಮಣ್ಯಂ, ಪ್ರಸಿದ್ಧ ಸ್ತ್ರೀ ವೇಷಧಾರಿ ಕೆರೆಮನೆ ಗಜಾನನ ಹೆಗಡೆ ಪ್ರಶಸ್ತಿಗೆ ಚಂಡೆ, ಮದ್ದಳೆ ವಾದಕ ಕೃಷ್ಣ ಯಾಜಿ ಇಡಗುಂಜಿ ಆಯ್ಕೆಯಾಗಿದ್ದಾರೆ.

Advertisement

ಶಿವರಾಮ ಹೆಗಡೆ ಪ್ರಶಸ್ತಿ 25ಸಾವಿರ ರೂ. ನಗದು, ಶಾಲು, ಸ್ಮರಣಿಕೆ, ಫಲಕ; ಗಜಾನನ ಹೆಗಡೆ ಪ್ರಶಸ್ತಿ 15 ಸಾವಿರ ರೂ. ನಗದು, ಶಾಲು, ಸ್ಮರಣಿಕೆ ಒಳಗೊಂಡಿದೆ. ಫೆ.20 ರಿಂದ 24ರವರೆಗೆ ಕೆರೆಮನೆ ಯಕ್ಷಾಂಗಣದ ಶಂಭು ಹೆಗಡೆ ಬಯಲು ರಂಗಮಂದಿರ ದಲ್ಲಿ ನಡೆಯುವ ರಾಷ್ಟ್ರೀಯ ನಾಟ್ಯೋತ್ಸವ ದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ಕಾರ್ಯಾಧ್ಯಕ್ಷ ಲಕ್ಷ್ಮೀನಾರಾಯಣ ಕಾಶಿ ಮತ್ತು ಕೆರೆಮನೆ ಸಂಸ್ಥೆಗಳ ನಿರ್ದೇಶಕ ಶಿವಾನಂದ ಹೆಗಡೆ ಕೆರೆಮನೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next