Advertisement

ಪಚ್ಚನಾಡಿ ತ್ಯಾಜ್ಯ ವಿಲೇವಾರಿ ಪ್ರದೇಶದಲ್ಲಿ ಬೆಂಕಿ: ಮುಂದುವರಿದ ಕಾರ್ಯಾಚರಣೆ

11:25 PM Jan 15, 2023 | Team Udayavani |

ಮಂಗಳೂರು: ಪಚ್ಚನಾಡಿ ತ್ಯಾಜ್ಯ ವಿಲೇವಾರಿ ಪ್ರದೇಶದಲ್ಲಿ ಕೆಲವು ದಿನಗಳ ಹಿಂದೆ ತಗಲಿದ್ದ ಬೆಂಕಿ ಶಮನಗೊಳ್ಳುತ್ತಿದ್ದು, ಕಾರ್ಯಾಚರಣೆ ರವಿವಾರವೂ ಮುಂದುವರಿದಿತ್ತು.

Advertisement

ಐದು ಹಿಟಾಚಿ ಮತ್ತು ಪಾಳಿಯಲ್ಲಿ ನಾಲ್ಕು ಅಗ್ನಿಶಾಮಕ ದಳದ ವಾಹನ ಕಾರ್ಯನಿರ್ವಹಿಸುತ್ತಿದೆ. ಗುಡ್ಡೆಬಿದ್ದ ತ್ಯಾಜ್ಯವನ್ನು ಸಮತಟ್ಟು ಮಾಡುವ ಕಾರ್ಯ ನಡೆಯುತ್ತಿದ್ದು, ಆ ವೇಳೆ ಕೆಲವೆಡೆ ಹೊಗೆ ಕಾಣಿಸಿಕೊಳ್ಳುತ್ತಿದೆ. ಅಲ್ಲಿಗೆ ನೀರಿನ ಟ್ಯಾಂಕರ್‌ ಸಹಿತ ಜನರು ತೆರಳಲು ವ್ಯವಸ್ಥೆ ಮಾಡಲಾಗಿದೆ.

ಇನ್ನು ಒಂದೆರಡು ದಿನಗಳಲ್ಲಿ ಹೊಗೆ ಪೂರ್ತಿಯಾಗಿ ಕಡಿಮೆಯಾಗುವ ನಿರೀಕ್ಷೆ ಹೊಂದಲಾಗಿದೆ. ಸ್ಥಳಕ್ಕೆ ಮೇಯರ್‌ ಜಯಾನಂದ ಅಂಚನ್‌ ಸಹಿತ ಪಾಲಿಕೆ ಅಧಿಕಾರಿಗಳು ಭೇಟಿ ನೀಡಿ ಕಾರ್ಯಾಚರಣೆಯನ್ನು ಪರಿಶೀಲಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next