Advertisement

ಮಿಜೋರಾಂ ರಾಜ್ಯ ಪಾಲರಾಗಿ ಪಿಳ್ಳೈ

12:25 AM Oct 26, 2019 | Team Udayavani |

ಹೊಸದಿಲ್ಲಿ: ಕೇರಳದ ಬಿಜೆಪಿ ಘಟಕದ ಅಧ್ಯಕ್ಷ ಪಿ.ಎಸ್‌.ಶ್ರೀಧರನ್‌ ಪಿಳ್ಳೈ(65) ಅವರನ್ನು ಮಿಜೋರಾಂ ನೂತನ ರಾಜ್ಯಪಾಲರನ್ನಾಗಿ ಶುಕ್ರವಾರ ನೇಮಕ ಮಾಡಲಾಗಿದೆ ಎಂದು ರಾಷ್ಟ್ರಪತಿ ಭವನ ತಿಳಿಸಿದೆ. ಅಸ್ಸಾಂ ರಾಜ್ಯಪಾಲರಾದ ಜಗದೀಶ್‌ ಮುಖೀ ಅವರು ಮಿಜೋರಾಂ ರಾಜ್ಯಪಾಲರಾಗಿ ಹೆಚ್ಚುವರಿ ಹೊಣೆ ಹೊತ್ತಿದ್ದರು. ಶ್ರೀಧರನ್‌ ಕೇರಳದ ಅಳಪ್ಪುಳ ಜಿಲ್ಲೆಯ ವೆನ್ಮೊನಿಯವರು. ಎಬಿವಿಪಿ ಕಾರ್ಯಕರ್ತರಾಗಿ ರಾಜಕೀಯಕ್ಕೆ ಬಂದ ಅವರು ಖ್ಯಾತ ವಕೀಲ, ಲೇಖಕ ಹಾಗೂ ಅಂಕಣಕಾರರೂ ಆಗಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next