Advertisement

200ಕ್ಕೂ ಅಧಿಕ ಎಕರೆ ಅರಣ್ಯ ಬೆಂಕಿಗಾಹುತಿ

12:30 AM Mar 06, 2019 | |

ಮೂಡಿಗೆರೆ: ಬಂಡೀಪುರ ಅಭಯಾರಣ್ಯ ಬೆಂಕಿಗೆ ಆಹುತಿಯಾದ ಘಟನೆ ಮಾಸುವ ಮುನ್ನವೇ ಚಿಕ್ಕಮಗಳೂರು ಜಿಲ್ಲೆ ಕುದುರೆಮುಖ ಅಭಯಾರಣ್ಯ ವ್ಯಾಪ್ತಿಯಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಅಭಯಾರಣ್ಯ
ವ್ಯಾಪ್ತಿಯ ಭಗವತಿ ಗುಡ್ಡದಲ್ಲಿ ಸೋಮವಾರ ಮಧ್ಯಾಹ್ನದ ನಂತರ ಬೆಂಕಿ ಕಾಣಿಸಿಕೊಂಡಿದ್ದು, ಸದ್ಯ ಬೆಂಕಿ ಆರಿಸಲಾಗಿದೆ.

Advertisement

ಬೆಂಕಿಯಿಂದ ಸುಮಾರು 200 ಎಕರೆಗೂ ಅಧಿಕ ಪ್ರಮಾಣದ ಅರಣ್ಯ ನಾಶವಾಗಿದ್ದು ಬೆಲೆ ಬಾಳುವ ಮರ, ಹಾಗೂ ಅಪರೂಪದ ಸಸ್ಯಗಳು ಭಸ್ಮಗೊಂಡಿವೆ. ಕಾಡಿಗೆ ಬೆಂಕಿ ಆಕಸ್ಮಿಕವಾಗಿ ತಗುಲಿದೆಯೋ ಅಥವಾ ಕಿಡಿಗೇಡಿಗಳು ಬೆಂಕಿ
ಹಾಕಿದ್ದಾರೋ ಎಂಬುದು ಇನ್ನೂ ತಿಳಿದಿಲ್ಲ. ಇದು ಕಿಡಿಗೇಡಿಗಳ ಕೃತ್ಯ ಎಂಬ ಶಂಕೆ ಮೂಡಿದ್ದು, ಈ ಬಗ್ಗೆ ತನಿಖೆ
ನಡೆಯುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next