Advertisement
ಇತ್ತ ಕಾಂಗ್ರೆಸ್ಸಿಗರು ಏ. 3ರಂದು ಪಕ್ಷದ ರಾಷ್ಟ್ರೀಯ ರಾಹುಲ್ ಗಾಂಧಿ ಜಿಲ್ಲೆಯ ಪ್ರವಾಸ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ನಗರಕ್ಕೆ ಇಂಧನ ಡಿ.ಕೆ. ಶಿವಕುಮಾರ್ ಭೇಟಿ ನೀಡಿ, ಕೆಲ ಸೂಚನೆ ನೀಡಿದ್ದು, ಮುಖಂಡರು ಸಮಾವೇಶದ ತಯಾರಿಯಲ್ಲಿ ನಿರತರಾಗಿದ್ದಾರೆ.
Related Articles
Advertisement
ಫ್ಲೆಕ್ಸ್-ಫಲಕ ತೆರವು ಚುರುಕು
ಚುನಾವಣೆ ನೀತಿ ಸಂಹಿತೆ ಜಾರಿಯಾದ ಬೆನ್ನಲ್ಲೇ ವಿವಿಧೆಡೆ ಅಳವಡಿಸಲಾಗಿರುವ ಜಾಹೀರಾತು ಫಲಕ, ಸಿಎಂ, ಸಚಿವರ ಭಾವಚಿತ್ರ ಇರುವ ಸರ್ಕಾರದ ವಿವಿಧ ಯೋಜನೆಗಳ ಪ್ರಚಾರ ಫಲಕ ತೆರವು ಮಾಡುವ ಕಾರ್ಯ ಬುಧವಾರ ಸಹ ಚುರುಕಾಗಿ ನಡೆಯಿತು. ಚುನಾವಣಾ ತಹಶೀಲ್ದಾರ್, ಮತಗಟ್ಟೆ ಅಧಿಕಾರಿ, ಸಹಾಯಕ ಅಧಿಕಾರಿಗಳು, ಸಿಬ್ಬಂದಿ 8 ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಕಾಣುವ ರೀತಿಯಲ್ಲಿರುವ ಪಕ್ಷ, ರಾಜಕೀಯ ನಾಯಕರ ಪ್ರಚಾರ ಫಲಕ, ಫ್ಲೆಕ್ಸ್ ಬ್ಯಾನರ್ ತೆರವುಗೊಳಿಸುವ ಅಥವಾ ಭಾವಚಿತ್ರ, ಚಿನ್ಹೆ ಮುಚ್ಚುವ ಕಾರ್ಯ ಕೈಗೊಂಡರು. ಆದರೆ, ದಿನವಿಡೀ ಕಾರ್ಯಾಚರಣೆ ಮಾಡಿದರೂ ಕಾರ್ಯ ಪೂರ್ಣಗೊಳ್ಳಲಿಲ್ಲ. ಗುರುವಾರ ಸಹ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಚುನಾವಣಾ ಶಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಈ ಮಧ್ಯೆ ಫಲಕತೆರವು, ಮುಚ್ಚುವ ಕಾರ್ಯದಲ್ಲಿ ಸಿಬ್ಬಂದಿ ಯಡವಟ್ಟು ಮಾಡಿರುವ ಘಟನೆ ಸಹ ನಡೆದಿದೆ. ಪಿಬಿ ರಸ್ತೆಯಲ್ಲಿರುವ ಲೋಕೋಪಯೋಗಿ ಇಲಾಖೆ ಕಚೇರಿ ಮುಂದೆ ಲೋಕೋಪಯೋಗಿ ಇಲಾಖೆಯ ರಸ್ತೆಗಳ ಕುರಿತು ಹಾಕಲಾಗಿರುವ ಸಾರ್ವಜನಿಕರ ಜಾಗೃತಿ ಫಲಕದಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಲೋಕೋಪಯೋಗಿ ಇಲಾಖೆ ಸಚಿವ ಎಚ್.ಸಿ. ಮಹದೇವಪ್ಪನವರ ಭಾವಚಿತ್ರ ಮುಚ್ಚದೇ ಇರುವುದು ಕಂಡುಬಂತು. ಅಧಿಕಾರಿಗಳೂ ಫುಲ್ ಬ್ಯುಸಿ
ಚುನಾವಣೆಯ ವೇಳಾಪಟ್ಟಿ ನಿಗದಿಯಾಗುತ್ತಲೇ ಇತ್ತ ಅಧಿಕಾರಿಗಳು ಬಿಡುವಿಲ್ಲದೆ ಕೆಲಸದಲ್ಲಿ ತೊಡಗಿಕೊಳ್ಳುವಂತಾಗಿದೆ. ಜಿಲ್ಲಾಧಿಕಾರಿ, ಚುನಾವಣಾ ವಿಭಾಗದ ಅಧಿಕಾರಿಗಳ ಜೊತೆಗೆ ಚುನಾವಣಾ ಕಾರ್ಯಕ್ಕೆ ನಿಯೋಜಿತರಾಗಿರುವ ವಿವಿಧ ಇಲಾಖೆಯ ಜಿಲ್ಲಾಮಟ್ಟದ ಅಧಿಕಾರಿಗಳು ಬೆಳಗ್ಗೆಯಿಂದ ಸಂಜೆಯವರೆಗೆ ಚುನಾವಣಾ ಆಯೋಗದ ಅಧಿಕಾರಿಗಳ ಜೊತೆಗೆ ವಿಡಿಯೋ ಕಾನ್ಪರೆನ್ಸ್ನಲ್ಲಿ ನಿರತರಾಗಿದ್ದರು. ಚುನಾವಣೆ ನೀತಿ ಸಂಹಿತೆಯ ಪಾಠ, ಅಕ್ರಮ ತಡೆಗೆ ಕೈಗೊಳ್ಳಬೇಕಾದ ಕ್ರಮ, ಶಾಂತಿಯುತ ಚುನಾವಣೆಗೆ ನಡೆಸಿಕೊಳ್ಳಬೇಕಾದ ತಯಾರಿ, ಸಿಬ್ಬಂದಿ, ಅಧಿಕಾರಿಗಳಿಗೆ ನೀಡಿರುವ ತರಬೇತಿಯ ಪರೀಕ್ಷೆ ಹೀಗೆ ಹಲವು ವಿಷಯಗಳ ಕುರಿತು ದಿನವಿಡೀ ಚರ್ಚೆ ನಡೆಯಿತು.