Advertisement

ರೋಗಿ ಸಾವು: ಆಸ್ಪತ್ರೆ ವಿರುದ್ಧ ಆಕ್ರೋಶ

01:42 PM Apr 21, 2021 | Team Udayavani |

ಆನೇಕಲ್‌: ಜ್ವರದಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬಮೃತಪಟ್ಟ ಹಿನ್ನೆಲೆಯಲ್ಲಿ, ಇದಕ್ಕೆ ಆಸ್ಪತ್ರೆ ನಿರ್ಲಕ್ಷ್ಯವೇಕಾರಣ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದಘಟನೆ ತಾಲೂಕಿನ ಜಿಗಣಿಯ ವೈ.ಕೆ.ನಾರಾಯಣ್‌ಆಸ್ಪತ್ರೆಯಲ್ಲಿ ನಡೆದಿದೆ.

Advertisement

ಕಳೆದ ನಾಲ್ಕು ದಿನಗಳ ಹಿಂದೆ ಜ್ವರ ಎಂದುಸಂಪಂಗಿರಾಮ (27) ಎಂಬ ರೋಗಿ ದಾಖಲಾಗಿದ್ದ.ಎರಡು ದಿನಗಳ ಬಳಿಕ ರೋಗಿಗೆ ಕೊರೊನಾ ಇದೆಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.

ಅದಾದ ಬಳಿಕಎರಡು ದಿನದಲ್ಲಿ ರೋಗಿ ಮೃತಪಟ್ಟಿದ್ದಾನೆ ಎಂದುಹೇಳುತ್ತಿದ್ದಾರೆ. ಈ ಆಸ್ಪತ್ರೆಯಲ್ಲಿ ರೋಗಿಗಳಿಗೆ ಚಿಕಿತ್ಸೆನೀಡುತ್ತಿಲ್ಲ. ಹಣ ದೋಚಿ, ಶವ ನೀಡುತ್ತಿದ್ದಾರೆ ಎಂದು ಮೃತರೋಗಿಯ ಸಂಬಂಧಿಕ, ದಲಿತ ಸಂಘರ್ಷ ಸಮಿತಿಯಮುಖಂಡ ಕೆ.ಟಿ.ಮುನಿಯಪ್ಪ ಆರೋಪಿಸಿದ್ದಾರೆ.

ಮೃತ ಸಂಪಂಗಿರಾಮಯ್ಯ ಇನ್ನೂ ಚಿಕ್ಕ ವಯಸ್ಸಿನಸದೃಢವಾಗಿದ್ದ ಯುವಕ. ವಿವಾಹವಾಗಿ ಎರಡುವರ್ಷವಾಗಿತ್ತು. ಸಾಯುವ ವಯಸ್ಸೇ ಇರಲಿಲ್ಲ,ಸರಿಯಾದ ಚಿಕಿತ್ಸೆ ನೀಡಿದ್ದರೆ ಬದುಕುಳಿಯುತ್ತಿದ್ದಇಂತಹ ಬೇಜಾವಾªರಿ ಆಸ್ಪತ್ರೆ ವಿರುದ್ಧ ಕ್ರಮಕೈಗೊಳ್ಳಲುಸರ್ಕಾರವನ್ನು ಆಗ್ರಹಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next