Advertisement
ಪಟ್ಟಣದ ತಾಪಂ ಸಭಾಂಗಣದಲ್ಲಿ ನಡೆದ ತಾಪಂ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಸದಸ್ಯರು, ಸರ್ಕಾರಿ ಶಾಲೆಗಳ ದುಸ್ಥಿತಿಯ ಬಗ್ಗೆ ಶಿಕ್ಷಣಾಧಿಕಾರಿಗಳಿಗೆ ಪ್ರಶ್ನಿಸಿದರು. ಶಾಲಾ ಮಕ್ಕಳ ಹಾಜರಾತಿ ಕೊರತೆ, ಪರೀಕ್ಷೆಗೆ ಕೂರಲು ವಿದ್ಯಾರ್ಥಿಗಳಿಗೆ ಅನರ್ಹರು ಎಂದು ಶಾಲೆಯವರು ತಿಳಿಸಿರುವುದು, ಪೋಷಕರಿಗೆ ಸೂಕ್ತ ಮಾಹಿತಿ ನೀಡದ ಶಾಲೆಗಳ ಬಗ್ಗೆ ಯಾರು ಹೊಣೆ ಎಂದು ಪ್ರಶ್ನಿಸಿದರು. ತಾಪಂ ಸದಸ್ಯ ಕುಕ್ಕೆ ಪ್ರಶಾಂತ್ ಮಾತನಾಡಿ, ತಾಲೂಕಿನ ಕುಕ್ಕೆ ಸ.ಹಿ.ಪ್ರಾ. ಶಾಲೆಯಲ್ಲಿ ಶಾಲಾ ಹಿಂಬಾಗದ ಅಕೇಶಿಯ ಕಡಿತ ಮಾಡಿದ ಹಣವನ್ನು ಎರಡು ವರ್ಷಗಳ ಹಿಂದೆ ಶಿಕ್ಷಕರೊಬ್ಬರು ತೆಗೆದುಕೊಂಡಿದ್ದಾರೆ. ಆ ಶಿಕ್ಷಕರು ಬೇರೆ ಊರಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಆ ಶಿಕ್ಷಕರ ಬಗ್ಗೆ ಕ್ರಮ ಕೈಗೊಂಡಿಲ್ಲ ಯಾಕೆ ಎಂದು ಪ್ರಶ್ನಿಸಿದರು. ತಾಲೂಕಿನ ಹಲವು ಸರ್ಕಾರಿ ಶಾಲೆಗಳ ಜಾಗ ಒತ್ತುವರಿಯಾಗಿದ್ದು, ಸುಣ್ಣ ಬಣ್ಣವಿಲ್ಲದೆ ಶಾಲಾ ಕಟ್ಟದ ದುಸ್ಥಿತಿ ತಲುಪಿದೆ. ಭೂದಾನಿಗಳ ಜಾಗವನ್ನು ಶಿಕ್ಷಣ ಇಲಾಖೆ ಕಳೆದುಕೊಳ್ಳುವ ಸ್ಥಿತಿ ತಲುಪಿದೆ ಎಂದು ದೂರಿದರು.
Advertisement
ಶಿಕ್ಷಣ ಇಲಾಖಾಧಿಕಾರಿಗಳ ವಿರುದ್ಧ ಆಕ್ರೋಶ
10:16 AM Feb 03, 2019 | |
Advertisement
Udayavani is now on Telegram. Click here to join our channel and stay updated with the latest news.