Advertisement

ನಮ್ಮ ದೇಶಕ್ಕೆ ಅಫ್ತಾಬ್ ನಂತವರು ಬೇಡ: ಅಸ್ಸಾಂ ಸಿಎಂ ಶರ್ಮಾ

09:29 PM Nov 20, 2022 | Team Udayavani |

ದೆಹಲಿ: ನಮ್ಮ ದೇಶಕ್ಕೆ ಶ್ರದ್ಧಾ ಪ್ರಕರಣದ ಆರೋಪಿ ಅಫ್ತಾಬ್ ನಂತವರ ಅಗತ್ಯವಿಲ್ಲ, ಆದರೆ ಭಗವಾನ್ ರಾಮನಂತಹ ವ್ಯಕ್ತಿ, ಪ್ರಧಾನಿ ಮೋದಿಯಂತಹ ನಾಯಕನ ಅಗತ್ಯವಿದೆ ಎಂದು ಅಸ್ಸಾಂ ಸಿಎಂ ಮತ್ತು ಬಿಜೆಪಿ ನಾಯಕ ಹಿಮಂತ ಬಿಸ್ವಾ ಶರ್ಮಾ ಭಾನುವಾರ ಹೇಳಿಕೆ ನೀಡಿದ್ದಾರೆ.

Advertisement

ದೆಹಲಿಯಲ್ಲಿ ದೆಹಲಿಯ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣಾ ಪ್ರಚಾರದ ವೇಳೆ ಘೋಂಡಾ ಪ್ರದೇಶದಲ್ಲಿ ನಡೆದ ರೋಡ್ ಶೋನಲ್ಲಿ ಭಾಗಿಯಾದ ಅಸ್ಸಾಂ ಸಿಎಂ ಶರ್ಮಾ, ನಮಗೆ ಏಕರೂಪ ನಾಗರಿಕ ಸಂಹಿತೆ ಮತ್ತು ಲವ್ ಜಿಹಾದ್ ವಿರುದ್ಧ ಕಾನೂನು ಬೇಕು. ಅಫ್ತಾಬ್‌ಗಳನ್ನು ಕಠಿಣವಾಗಿ ಶಿಕ್ಷಿಸುವ ಕಾನೂನುಗಳು ನಮಗೆ ಬೇಕು ಎಂದರು.

ಚುನಾವಣೆಯ ಫಲಿತಾಂಶ ಏನಾಗುತ್ತದೆ ಎಂಬುದನ್ನು ಜನರ ಉತ್ಸಾಹವು ಸ್ಪಷ್ಟಪಡಿಸುತ್ತದೆ. ಕೇಜ್ರಿವಾಲ್ ರಂಗಭೂಮಿಯಲ್ಲಿ ಉತ್ತಮರು. ಅವರು ಹಿಂದೂಗಳು ಶತ್ರುಗಳು ಎಂದು ಅವರು ಭಾವಿಸುತ್ತಾರೆ, ಆದರೆ ಹಿಂದೂಗಳಿಲ್ಲದೆ ಭಾರತ ಅಸ್ತಿತ್ವದಲ್ಲಿರಬಹುದೇ? ಅವರು ಸಿಎ ಎ (ಅನುಷ್ಠಾನ) ಸಮಯದಲ್ಲಿ ದೆಹಲಿಯಲ್ಲಿ ನಡೆದ ಗಲಭೆಗಳಿಗೆ ಕ್ಷಮೆಯಾಚಿಸಬೇಕು ಎಂದರು.

ಡಿಸೆಂಬರ್ 4 ರ ಎಂಸಿಡಿ ಚುನಾವಣೆಗೆ ಬಿಜೆಪಿಯ ಘಟಾನುಘಟಿ ನಾಯಕರು ಪ್ರಚಾರ ನಡೆಸುತ್ತಿದ್ದು, ಪಶ್ಚಿಮ ದೆಹಲಿಯ ಉತ್ತಮ್ ನಗರದಲ್ಲಿ ‘ವಿಜಯ್ ಸಂಕಲ್ಪ್’ ರೋಡ್ ಶೋನಲ್ಲಿ ರಕ್ಷಣಾ ಸಚಿವ ಮತ್ತು ಬಿಜೆಪಿ ನಾಯಕ ರಾಜನಾಥ್ ಸಿಂಗ್ ಭಾಗವಹಿಸಿದ್ದಾರೆ.

ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ದೆಹಲಿಯ ಸಂಗಮ್ ವಿಹಾರ್‌ನಲ್ಲಿ ರೋಡ್‌ಶೋ ನಡೆಸಿದರು.ದೆಹಲಿಯ ಜನರು ಕೇಜ್ರಿವಾಲ್ ಸರ್ಕಾರದಿಂದ ಬೇಸತ್ತಿದ್ದಾರೆ. ಭ್ರಷ್ಟಾಚಾರದಲ್ಲಿ ಮುಳುಗಿರುವ ಸರಕಾರವಿದು. ಇಲ್ಲಿ ನೆರೆದಿರುವ ಜನರ ಸಂಖ್ಯೆ ನೋಡಿದರೆ ಬಿಜೆಪಿಗೆ ಆಶೀರ್ವಾದ ಸಿಗಲಿದೆ ಎಂದು ಹೇಳಿದರು.

Advertisement

ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ ಮತ್ತು ಪೂರ್ವ ದೆಹಲಿಯ ಬಿಜೆಪಿ ಸಂಸದ ಗೌತಮ್ ಗಂಭೀರ್ ಮಂಡವಾಲಿಯಲ್ಲಿ ರೋಡ್ ಶೋ ನಡೆಸಿದರು.

ದೆಹಲಿ ಎಂಸಿಡಿ ಚುನಾವಣೆಯಲ್ಲಿ 250 ಸ್ಥಾನಗಳಿಗೆ ಒಟ್ಟು 1,349 ಅಭ್ಯರ್ಥಿಗಳು ಕಣದಲ್ಲಿದ್ದಾರೆ, ಅವರಲ್ಲಿ 709 ಮಹಿಳೆಯರು ಮತ್ತು 640 ಪುರುಷರು.

Advertisement

Udayavani is now on Telegram. Click here to join our channel and stay updated with the latest news.

Next