Advertisement
ಮಾರಿಗುಡಿ ರಸ್ತೆಯ ಪಕ್ಕದ ಟೈಲರ್ ಭವನದಲ್ಲಿ ಅಖೀಲ ಭಾರತ ಮುಂಡಾಲ ಸಮಾಜದ ಜಿಲ್ಲಾ ಸಮಿತಿ ವತಿಯಿಂದ ಬುಧವಾರ ಸಂಜೆ ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಮುಂಡಾಲ ಸಮಾಜದವರು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿ ಉನ್ನತ ಸ್ಥಾನ ಪಡೆಯಬೇಕು.
Related Articles
ಮಾಡುವುದರೊಂದಿಗೆ ಮುಂಡಾಲ ಸಮಾಜದ ಅಭಿವೃದ್ಧಿಗೂ ಮುಂದಾಗಬೇಕು ಎಂದು ತಿಳಿಸಿದರು.
Advertisement
ಜಿಲ್ಲಾ ಸಮಿತಿ ಸದಸ್ಯ ಜಾನ್ನವ ಮಾತನಾಡಿ, ಜೀವನಕ್ಕಾಗಿ ದಕ್ಷಿಣ ಕನ್ನಡದಿಂದ ಬಂದವರು ತಲೆತಲಾಂತರದಿಂದ ಇಲ್ಲೇ ವಾಸ ಮಾಡುತ್ತಿದ್ದಾರೆ. ಇಂದಿಗೂ ಕಾಫಿ ತೋಟಗಳಲ್ಲಿ ಜೀತದಾಳುಗಳಂತೆ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಸ್ವಂತ ನಿವೇಶನ ಇಲ್ಲ. ದಯಮಾಡಿ ನಿವೇಶನ ರಹಿತರಿಗೆ ನಿವೇಶನ ಹಾಗೂ ಅನುದಾನ ಕೊಡಿಸಬೇಕು ಹಾಗೂ ಸಮಾಜದ ಸಮುದಾಯ ಭವನ ನಿರ್ಮಾಣಕ್ಕೂ ಸಹಕರಿಸಬೇಕೆಂದು ಮನವಿ ಸಲ್ಲಿಸಿದರು.
ಟೈಲರ್ ಅಸೋಸಿಯೇಶನ್ ಅಧ್ಯಕ್ಷ ಮಹಮ್ಮದ್ ಶಫಿಖಾನ್, ಟೈಲರ್ ಸಂಘದ ಸ್ಥಾಪಕ ಅಧ್ಯಕ್ಷ ಲಕ್ಷ್ಮಣ, ಉಪಾಧ್ಯಕ್ಷೆ ಲಕ್ಷ್ಮಿ, ರಾಜಕುಮಾರ್, ಸುಧಾಕರ್ ಮತ್ತಿತರರು ಉಪಸ್ಥಿತರಿದ್ದರು.