Advertisement

9 ಜನರನ್ನು ಬಲಿ ಪಡೆದ ನರಭಕ್ಷಕ ಹುಲಿಯ ಬೇಟೆಗೆ ಕಾರ್ಯಾಚರಣೆ

04:06 PM Oct 08, 2022 | Team Udayavani |

ಪಾಟ್ನಾ : ಬಿಹಾರದ ಪಶ್ಚಿಮ ಚಂಪಾರಣ್ ಜಿಲ್ಲೆಯ ಬಗಾಹಾದಲ್ಲಿ ಒಂಬತ್ತು ಜನರ ಹತ್ಯೆಗೆ ಕಾರಣವಾದ ‘ನರಭಕ್ಷಕ’ ಹುಲಿಯನ್ನು ಕೊಲ್ಲಲು ಆದೇಶ ಹೊರಡಿಸಲಾಗಿದೆ.

Advertisement

ಹುಲಿಯು ಮಾನವ ವಾಸಸ್ಥಳದಲ್ಲಿ ವಾಸಿಸಲು ಒಗ್ಗಿಕೊಂಡಿದೆ ಎಂದು ದೃಢಪಡಿಸಿದ್ದು, ಕಾರ್ಯವಿಧಾನದ ಪ್ರಕಾರ ಹುಲಿಯನ್ನು ಕೊಲ್ಲಲು ಆದೇಶಗಳನ್ನು ನೀಡಲಾಗುತ್ತದೆ. ಕಳೆದ 3 ದಿನಗಳಲ್ಲಿ ಹುಲಿ 4 ಜನರನ್ನು ಹತ್ಯೆಗೈದಿದೆ ಎಂದು ಡಿಎಫ್‌ಒ ಹೇಳಿದ್ದಾರೆ.

ಇದನ್ನೂ ಓದಿ : ನಾಳೆ ಬೆಂಗಳೂರಿನಲ್ಲಿ ನಡೆಯಲಿದೆ ಫಿಲ್ಮ್ ಫೇರ್ ಅವಾರ್ಡ್ಸ್: ಇಲ್ಲಿದೆ ಕನ್ನಡ ನಾಮಿನೇಶನ್ಸ್

ಹುಲಿಯು ಕಳೆದ 3 ದಿನಗಳಲ್ಲಿ 4 ಜನರನ್ನು ಬಲಿಪಡೆದಿದೆ. ಈಗಾಗಲೆ ಗ್ರಾಮದ ಜನರು ಭಯಭೀತರಾಗಿ ಮನೆಯಿಂದ ಹೊರ ಬರಲು ಹೆದರುತ್ತಿದ್ದಾರೆ. ಅರಣ್ಯ ಇಲಾಖೆ ಸಿಬಂದಿಗಳು ಹುಲಿಯ ಅಂತ್ಯಕ್ಕೆ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಸ್ಥಳದಲ್ಲಿ ಪೊಲೀಸರು ಭದ್ರತೆ ಕೈಗೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next