Advertisement

ದಿನಗೂಲಿ ನೌಕರರಿಗೆ ಗ್ರ್ಯಾಚ್ಯುಯಿಟಿ ನೀಡಲು ಆದೇಶ

06:37 AM May 18, 2019 | Lakshmi GovindaRaj |

ಬೆಂಗಳೂರು: ರಾಜ್ಯ ಸರ್ಕಾರ ದಿನಗೂಲಿ ನೌಕರರ ಕ್ಷೇಮಾಭಿವೃದ್ಧಿ ತಿದ್ದುಪಡಿ ಕಾಯ್ದೆಯನ್ನು ಜಾರಿಗೊಳಿಸಿ ಆದೇಶಿಸಿದೆ. ದಿನಗೂಲಿ ನೌಕರರ ನಿವೃತ್ತಿ ನಂತರ ಉಪದಾನ (ಗ್ರ್ಯಾಚ್ಯುಯಿಟಿ) ಪಡೆಯಲು ಅನುಕೂಲವಾಗುವಂತೆ 1972ರ ಕೇಂದ್ರ ಸರ್ಕಾರದ ಕಾಯ್ದೆಯ ಆಧಾರದಲ್ಲಿ ದಿನಗೂಲಿ ನೌಕರರ ಕ್ಷೇಮಾಭಿವೃದ್ಧಿ ತಿದ್ದುಪಡಿ ಕಾಯ್ದೆಯನ್ನು ಜಾರಿಗೆ ತರಲಾಗಿದ್ದು, ಅರ್ಹ ದಿನಗೂಲಿ ನೌಕರರು ತಮ್ಮ ನಿವೃತ್ತಿಯ ನಂತರ ಗ್ರ್ಯಾಚ್ಯುಯಿಟಿ ಪಡೆಯಲು ಈ ಕಾಯ್ದೆ ಅವಕಾಶ ಕಲ್ಪಿಸಿ ಕೊಟ್ಟಿದೆ.

Advertisement

ದಿನಗೂಲಿ ನೌಕರರು ದಿನಗೂಲಿ ಆಧಾರದಲ್ಲಿ ಸಲ್ಲಿಸಿರುವ ಸಂಪೂರ್ಣ ಸೇವಾವಧಿಯನ್ನು ಗ್ರ್ಯಾಚ್ಯುಯಿಟಿ ನೀಡಲು ಪರಿಗಣಿಸುವಂತೆ ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಈ ಕುರಿತು ಅಧಿಕೃತ ರಾಜ್ಯ ಪತ್ರ ಪ್ರಕಟಗೊಂಡ ತಕ್ಷಣ ಆದೇಶ ಜಾರಿಗೆ ಬರಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next