Advertisement

ಶಿರಸಿ: ಭಾರಿ ಮಳೆಗೆ ಶಾಲಾ-ಕಾಲೇಜುಗಳಿಗೆ ರಜೆ; ಕೊನೇ‌ ಕ್ಷಣದ ಆದೇಶ ಎಡವಟ್ಟು!

09:50 AM Jul 05, 2022 | Team Udayavani |

ಶಿರಸಿ: ಭಾರಿ ಮಳೆ ಇರುವ ಕಾರಣ ಜಿಲ್ಲಾಡಳಿತ ಮಂಗಳವಾರ  ಜೂ.5 ರಂದು ರಜೆ ಘೋಷಣೆ‌ ಮಾಡಿ ಆದೇಶ ಹೊರಡಿಸಿದೆ.

Advertisement

ಆದರೆ, ಶಾಲೆ‌ ಆರಂಭವಾಗುವ ಕೇವಲ ಅರ್ಧ ಗಂಟೆ‌ ಮೊದಲು ಆದೇಶ ನೀಡಿದ್ದು, ಮಕ್ಕಳು -ಪಾಲಕರು ಹಾಗೂ ಸ್ವತಃ ಶಿಕ್ಷಣ ಇಲಾಖೆಯಲ್ಲಿ ಗೊಂದಲ‌ ಸೃಷ್ಟಿಸಿದೆ.

ಹವಾಮಾನ ಇಲಾಖೆ ಇಷ್ಟೊಂದು ಕ್ರಿಯಾಶೀಲ ಇದ್ದಾಗಲೂ ತುರ್ತು ರಜೆ ಘೋಷಣೆ‌ ಮಾಡುವ ಆದೇಶ ಕನಿಷ್ಠ 3-4 ಗಂಟೆ ಮೊದಲಾದರೂ ನೀಡಬೇಕು. ಮಕ್ಕಳು ಶಾಲೆಗೆ ಹೋದ ಬಳಿಕ ಆದೇಶ ಬಂದರೆ ಕಷ್ಟ ಎಂಬುದು ದೂರಾಗಿದೆ.

ಎಷ್ಟೋ ಹಳ್ಳಿಗಳಿಂದ ಬೆಳಿಗ್ಗೆ 7ರ ಹಾಲ್ಟಿಂಗ್ ಬಸ್ಸಿಗೆ ಶಾಲೆಗೆ ಹೋದವರಿಗೆ ಅತಂತ್ರ ಆಗಿದ್ದು, ಅವರು ಮನೆಗೆ ವಾಪಸ್‌ ಹೋಗಲು ಸಂಜೆ 5 ಗಂಟೆಗೆ ಬಸ್ ಇರುವುದರಿಂದ ಕಷ್ಟವಾಗಿದೆ. ಮಧ್ಯಾಹ್ನ ಬಿಸಿಯೂಟದ ಸಮಸ್ಯೆ ಕೂಡ ಆಗುತ್ತದೆ. ಈ ಹಿನ್ನಲೆಯಲ್ಲಿ ಸಾಕಷ್ಟು‌ ಮುಂಚಿತವಾಗಿ ಮಾಹಿತಿ‌ ನೀಡಬೇಕು ಎಂಬುದು‌ ಪಾಲಕರ ಹಾಗೂ ಶಿಕ್ಷಣ ಪ್ರೇಮಿಗಳ ಆಗ್ರಹವಾಗಿದೆ.

ಮಕ್ಕಳ ವಿಚಾರದಲ್ಲಿ ವಿಳಂಬದ ಆದೇಶ‌ ಆಗಬಾರದು ಎಂಬುದು ಇವರ ಹಕ್ಕೊತ್ತಾಯ.

Advertisement
Advertisement

Udayavani is now on Telegram. Click here to join our channel and stay updated with the latest news.

Next