Advertisement

ವಿಪಕ್ಷಗಳ ಉಪರಾಷ್ಟ್ರಪತಿ ಅಭ್ಯರ್ಥಿ ಮಾರ್ಗರೇಟ್‌ ಆಳ್ವ ನಾಮಪತ್ರ ಸಲ್ಲಿಕೆ

12:46 AM Jul 20, 2022 | Team Udayavani |

ಹೊಸದಿಲ್ಲಿ: ವಿಪಕ್ಷಗಳ ಉಪರಾಷ್ಟ್ರಪತಿ ಅಭ್ಯರ್ಥಿ ಮಾರ್ಗರೇಟ್‌ ಆಳ್ವ ಅವರು ಮಂಗಳವಾರ ನಾಮಪತ್ರ ಸಲ್ಲಿಸಿದ್ದಾರೆ.

Advertisement

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ಎನ್‌ಸಿಪಿ ವರಿಷ್ಠ ಶರದ್‌ ಪವಾರ್‌, ರಾಜ್ಯ ಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ಸಿಪಿಎಂ ನಾಯಕ ಯೆಚೂರಿ ಸೇರಿ ದಂತೆ ಹಲವು ನಾಯಕರು ಆಳ್ವರಿಗೆ ಸಾಥ್‌ ನೀಡಿದ್ದಾರೆ.

ಅನಂತರ ಮಾತನಾಡಿದ ಆಳ್ವ, “ಗೆಲ್ಲುವುದು- ಸೋಲುವುದು ಬದುಕಿನ ಒಂದು ಭಾಗ. ಚುನಾವಣೆಯೆಂದರೆ ನನಗೆ ಭಯವಿಲ್ಲ. ಎಲ್ಲ ಪಕ್ಷಗಳ ಸಂಸತ್‌ ಸದಸ್ಯರ ವಿಶ್ವಾಸವು ನನಗೆ ಜನರನ್ನು ಒಗ್ಗೂಡಿಸಲು ಮತ್ತು ಬಲಿಷ್ಠ ಹಾಗೂ ಒಗ್ಗೂಡಿದ ಭಾರತ ನಿರ್ಮಿಸಲು ಸಹಾಯ ಮಾಡಲಿದೆ’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next