Advertisement

ಕಲಬುರಗಿಯಲ್ಲಿ ಪಠಾಣ್ ಚಿತ್ರ ಪ್ರದರ್ಶನಕ್ಕೆ ವಿರೋಧ; ಕಲ್ಲು ತೂರಾಟ

05:25 PM Jan 25, 2023 | Team Udayavani |

ಕಲಬುರಗಿ: ಶಾರುಖ್ ಖಾನ್ ನಟನೆಯ ಪಠಾಣ್ ಸಿನಿಮಾ ಪ್ರದರ್ಶನವನ್ನು ವಿರೋಧಿಸಿ ಹಿಂದೂ ಸಂಘಟನೆಯ ಕಾರ್ಯಕರ್ತರು ಕಲಬುರಗಿಯಲ್ಲಿ ಬುಧವಾರ ಪ್ರತಿಭಟನೆ ನಡೆಸಿ ನಗರದ ಶೆಟ್ಟಿ ಮಲ್ಟಿಪ್ಲೆಕ್ಸ್‌ ಚಿತ್ರಮಂದಿರಕ್ಕೆ ಕಲ್ಲು ತೂರಾಟ ನಡೆಸಿದ್ದಾರೆ.

Advertisement

ಚಿತ್ರಮಂದಿರದ‌ ಮೇಲೆ ಕಲ್ಲು ತೂರಾಟ ನಡೆಸಿದ ಹೋರಾಟಗಾರರು ಸಿನಿಮಾ ಪ್ರದರ್ಶನ ತಡೆಯಲು ಗೇಟ್ ಜಂಪ್‌ ಮಾಡಲು ಪ್ರಯತ್ನಿಸಿದ್ದಾರೆ. ಈ ವೇಳೆ ಹಿಂದು ಜಾಗೃತಿ ಸೇನೆ ಕಲಬುರಗಿ ಜಿಲ್ಲಾಧ್ಯಕ್ಷ ಲಕ್ಷ್ಮೀ ಕಾಂತ್ ಸಾಧ್ವಿ ಎಡಗೈಗೆ ಗಾಯವಾಗಿದೆ.

ದೇಶ ವಿರೋಧಿ,ಹಿಂದೂ ವಿರೋಧಿ ಪಠಾಣ್ ಸಿನಿಮಾ ಎಂದು ಪ್ರದರ್ಶನ ಮಾಡಬಾರದೆಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. ಚಿತ್ರಮಂದಿರ ಗೇಟ್ ಬಳಿ ಕುಳಿತು ಹಿಂದೂ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next