Advertisement

ಸಮಾನತೆಯಿಲ್ಲ..! ಬಾಬಾ ಬುಡನ್ ದರ್ಗಾ ಆಡಳಿತ ಮಂಡಳಿ ನೇಮಕಕ್ಕೆ ವಿರೋಧ

02:53 PM Nov 19, 2022 | Team Udayavani |

ಚಿಕ್ಕಮಗಳೂರು: ಜಿಲ್ಲೆಯ ಪ್ರಸಿದ್ದ ಇನಾಂ ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ಆಡಳಿತ ಮಂಡಳಿ ರಚನೆಯ ಆದೇಶಕ್ಕೆ ಅಪಸ್ವರ ಎತ್ತಲಾಗಿದೆ. ಆದೇಶದಲ್ಲಿ ಒಂದು ಸಮುದಾಯವನ್ನು ಕಡೆಗಣಿಸಲಾಗಿದೆ ಎನ್ನುವ ಮಾತುಗಳು ಕೇಳಿಬಂದಿದೆ.

Advertisement

ಎರಡು ಸಮುದಾಯದವರು ಒಳಗೊಂಡಂತೆ ಎಂಟು ಜನ ಇರಬೇಕಿತ್ತು. ಒಂದೇ ಸಮುದಾಯದ ಏಳು ಜನರಿದ್ದಾರೆ, ಈ ಸಮಿತಿ ಮೇಲೆ ನಮಗೆ ನಂಬಿಕೆ ಇಲ್ಲ ಎಂದು ಆಡಳಿತ ಮಂಡಳಿ ರಚನೆಗೆ ಕೋಮು ಸೌಹಾರ್ದ ವೇದಿಕೆ ವಿರೋಧ ವ್ಯಕ್ತಪಡಿಸಿದೆ.

ಕೋಮು ಸೌಹಾರ್ದ ವೇದಿಕೆಯ ರಾಜ್ಯ ಕಾರ್ಯದರ್ಶಿ ಗೌಸ್ ಮೊಹಿನುದ್ದಿನ್ ವಿರೋಧ ಸೂಚಿಸಿದ್ದು, ಸಮಿತಿಯನ್ನು ವಿಸರ್ಜಿಸುವಂತೆ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next