Advertisement

ದ್ವಿತೀಯ ಪಿಯುಸಿ ಸೇರಲು 29ರವೆಗೆ ಅವಕಾಶ

11:06 PM Jul 22, 2019 | Lakshmi GovindaRaj |

ಬೆಂಗಳೂರು: ಪ್ರಸಕ್ತ ಸಾಲಿನಲ್ಲಿ ದ್ವಿತೀಯ ಪಿಯುಸಿಗೆ ಸೇರಲು ನಿಗದಿ ಪಡಿಸಿದ್ದ ಅಂತಿಮ ದಿನಾಂಕವನ್ನು ಜು. 29ರವರೆಗೂ ವಿಸ್ತರಿಸಲಾಗಿದೆ. ವಿಶೇಷ ದಂಡ ಶುಲ್ಕ ಸಹಿತವಾಗಿ ದ್ವಿತೀಯ ಪಿಯುಸಿಗೆ ಸೇರಿಕೊಳ್ಳಲು ಜು. 15 ಕಡೆಯ ದಿನವಾಗಿತ್ತು. ಆದರೂ ಕೆಲವು ವಿದ್ಯಾರ್ಥಿಗಳು ನಿಗದಿತ ದಿನಾಂಕದೊಳಗೆ ಶುಲ್ಕ ಪಾವತಿಸಿಲ್ಲ. ಆದರೂ ಕಾಲೇಜಿಗೆ ಹಾಜರಾಗಿದ್ದಾರೆ.

Advertisement

ವಿದ್ಯಾರ್ಥಿಗಳ ಮತ್ತು ಪಾಲಕರ ಹಿತದೃಷ್ಟಿಯಿಂದ ದ್ವಿತೀಯ ಪಿಯುಸಿಗೆ ಸೇರಿಕೊಳ್ಳಲು ನಿಗದಿ ಪಡಿಸಿರುವ ದಿನಾಂಕವನ್ನು ವಿಶೇಷ ದಂಡಶುಲ್ಕ 2,890 ರೂ. ಪಾವತಿಸಿ ಜು. 29ರವರೆಗೂ ಸೇರಿಕೊಳ್ಳಬಹುದಾಗಿದೆ ಎಂದು ಪಿಯು ಶಿಕ್ಷಣ ಇಲಾಖೆ ಪ್ರಕಟಣೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next