Advertisement

ನೇತ್ರದಾನ ಎಲ್ಲಕ್ಕಿಂತ ಶ್ರೇಷ್ಠ ದಾನ: ಡಾ|ಕ್ರಾಂತಿಕಿರಣ

11:39 AM Nov 28, 2021 | Team Udayavani |

ಹುಬ್ಬಳ್ಳಿ: ನಮ್ಮ ಜೀವನದ ಜ್ಯೋತಿ ಆರುತ್ತಿರುವಾಗ ಬೇರೆಯವರ ಬದುಕಿನಲ್ಲಿ ಬೆಳಕು ಹಚ್ಚುವ ಸಾಧನವೆಂದರೆ ನೇತ್ರದಾನ. ಇದು ಎಲ್ಲಕ್ಕಿಂತ ಶ್ರೇಷ್ಠ ದಾನ ಎಂದು ನರರೋಗ ತಜ್ಞ ಡಾ| ಕ್ರಾಂತಿಕಿರಣ ಹೇಳಿದರು.

Advertisement

ದುರ್ಗದ ಬಯಲಿನಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಜನ್ಮದಿನ ನಿಮಿತ್ತ ಬಿಜೆಪಿ ಹು-ಧಾ ಪೂರ್ವ ವಿಧಾನಸಭಾ ಕ್ಷೇತ್ರ, ಕರ್ನಾಟಕ ರತ್ನ ಪುನೀತ ರಾಜಕುಮಾರ ಅಭಿಮಾನಿ ಸಂಘ, ಡಾ| ಎಂ.ಎಂ. ಜೋಶಿ ನೇತ್ರ ವಿಜ್ಞಾನ ಸಂಸ್ಥೆ ಆಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ನೇತ್ರದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಮಾಜಿ ಶಾಸಕರಾದ ವೀರಭದ್ರಪ್ಪ ಹಾಲಹರವಿ, ಅಶೋಕ ಕಾಟವೆ, ಪಾಲಿಕೆ ಸದಸ್ಯರಾದ ರಾಧಾಬಾಯಿ ಸಫಾರೆ, ಶಿವು ಮೆಣಸಿನಕಾಯಿ, ಮುಖಂಡರಾದ ರಂಗಾ ಬದ್ದಿ, ಪ್ರಭು ನವಲಗುಂದಮಠ, ಸತೀಶ ಶೇಜವಾಡಕರ, ಶಿವಾನಂದ ಮುತ್ತಣ್ಣವರ, ಬಸವರಾಜ ಅಮ್ಮಿನಬಾವಿ, ಹನುಮಂತ ದೊಡ್ಡಮನಿ, ಬಿ.ಎಸ್‌. ಚಂದ್ರಶೇಖರ, ಮಂಜುನಾಥ ಚಿತ್ತಗಿಂಜಲ, ಶಶಿಕುಮಾರ ಬಿಜವಾಡ, ಅನೂಪ ಬಿಜವಾಡ, ಶ್ರೀಧರ ಹಳ್ಳಿ, ಗಣೇಶ ಅಮರಾವತಿ, ಮಿಥುನ ಚವ್ಹಾಣ, ನಾಗರಾಜ ಟಗರಗುಂಟಿ, ರಂಗನಾಯಕ, ವಿಜಯಕುಮಾರ ಅಪ್ಪಾಜಿ ಮೊದಲಾದವರಿದ್ದರು. ಡಾ| ಕ್ರಾಂತಿಕಿರಣ, ವೀರಭದ್ರಪ್ಪ ಹಾಲರವಿ, ಶಿವಾನಂದ ಮುತ್ತಣ್ಣವರ, ಪ್ರಭು ನವಲಗುಂದಮಠ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಮಾಧ್ಯಮ ಆಪ್ತ ಸಹಾಯಕ ಬಿ.ಎಸ್‌. ಚಂದ್ರಶೇಖರ ನೇತ್ರದಾನ ವಾಗ್ಧಾನ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next