Advertisement

ಆಪರೇಷನ್ ಕಮಲದ ಸರಕಾರ ಮಾಡಿರುವುದೇ ಲೂಟಿಗಾಗಿ: ಸಿದ್ದರಾಮಯ್ಯ

06:28 PM Jul 17, 2022 | Team Udayavani |

ಮೈಸೂರು: ಆಪರೇಷನ್ ಕಮಲದ ಮೂಲಕ ಸರಕಾರ ಮಾಡಿರುವುದೇ ಲೂಟಿ ಮಾಡಲು. ಜನರ ಸಮಸ್ಯೆ ಬಗ್ಗೆ ಇವರಿಗೆ ಕಾಳಜಿ ಇದೆಯಾ ಎಂದು ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ಭಾನುವಾರ ಕಿಡಿ ಕಾರಿದ್ದಾರೆ.

Advertisement

ಮಳೆ ಹಾನಿ‌ ಪ್ರದೇಶಗಳಿಗೆ ಸಚಿವರು ಹೋಗುತ್ತಿಲ್ಲ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿ, ಸಚಿವರು ಲೂಟಿ ಹೊಡೆಯುವುದರಲ್ಲಿ ಮುಳುಗಿದ್ದಾರೆ.ಇನ್ನೆಲ್ಲಿ ಜನರ ಸಮಸ್ಯೆ ಆಲಿಸುತ್ತಾರೆ ಎಂದರು.

ರಾಷ್ಟ್ರಪತಿ ಚುನಾವಣೆ ಹಿನ್ನೆಲೆಯಲ್ಲಿ ನಾನು ಮಳೆಹಾನಿ ಪ್ರದೇಶಗಳ ಪ್ರವಾಸ ಮುಂದೂಡಿದ್ದೇನೆ. ಪ್ರವಾಹ ಪೀಡಿತ ಪ್ರದೇಶಗಳಿಗೆ ಸರ್ಕಾರ ಕೂಡಲೇ ಪರಿಹಾರ ಘೋಷಿಸಬೇಕು. ಅಂದಾಜು 500ಕೋಟಿಯಷ್ಟು ನಷ್ಟವಾಗಿರುವ ಸಾಧ್ಯತೆ ಇದೆ ಎಂದರು.

2019ರಲ್ಲಿ ಯಡಿಯೂರಪ್ಪ ಸಿಎಂ ಆಗಿದ್ದ ವೇಳೆಯೂ ಪ್ರವಾಹ ಉಂಟಾಗಿ ಮನೆಗಳಿಗೆ ಹಾನಿಯಾಗಿತ್ತು. ಅಂದು‌ ಮನೆ ಕಳೆದುಕೊಂಡವರಿಗೆ ಇನ್ನೂ ಮನೆ ಕೊಟ್ಟಿಲ್ಲ. 2020ರಲ್ಲಿ ಮತ್ತೆ ಪ್ರವಾಹ ಬಂತು. ಆಗಲೂ ಪರಿಹಾರ ನೀಡಲಿಲ್ಲ. ಈಗ ಮತ್ತೆ ಪ್ರವಾಹ ಬಂದಿದೆ. ಈಗಲಾದರೂ ಸರ್ಕಾರ ಪರಿಹಾರ ನೀಡಬೇಕು.ಕೇವಲ ಭರವಸೆ ಕೊಟ್ಟು ಮುಂದೂಡಬಾರದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next