Advertisement

ಆಪರೇಷನ್‌ ಕಮಲ ಆಡಿಯೋ: ವಿಚಾರಣೆ 26ಕ್ಕೆ ಮುಂದೂಡಿಕೆ

11:06 PM Sep 17, 2019 | Team Udayavani |

ಕಲಬುರಗಿ: ಆಪರೇಷನ್‌ ಕಮಲ ಬಗ್ಗೆ ಆಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಯಡಿಯೂರಪ್ಪ ವಿರುದ್ಧದ ತನಿಖೆಗೆ ತಡೆಯಾಜ್ಞೆ ನೀಡಿರುವುದನ್ನು ತೆರವುಗೊಳಿಸಲು ಕೋರಿ ಜೆಡಿಎಸ್‌ ಮುಖಂಡ ಶರಣಗೌಡ ಪಾಟೀಲ ಕಂದಕೂರ ಸಲ್ಲಿಸಿದ್ದ ಅರ್ಜಿ ವಿಚಾರಣೆ ಸೆ.26ಕ್ಕೆ ಮುಂದೂಡಿಕೆಯಾಗಿದೆ.

Advertisement

ಗುರುಮಠಕಲ್‌ ಶಾಸಕ ನಾಗಗೌಡ ಕಂದಕೂರ ಅವರ ಪುತ್ರ ಶರಣಗೌಡ ಪಾಟೀಲ ಸಲ್ಲಿಸಿದ ಅರ್ಜಿ ವಿಚಾರಣೆ ಯನ್ನು ಕಲಬುರಗಿ ಹೈಕೋರ್ಟ್‌ ಪೀಠದ ನ್ಯಾ| ಕೆ.ಎಸ್‌. ಮುದಗಲ್‌ ಮುಂದೂಡಿ ಆದೇಶಿಸಿದ್ದಾರೆ. ಶರಣಗೌಡ ಪಾಟೀಲ ಆಪರೇಷನ್‌ ಕಮಲದ ಬಗ್ಗೆ ಆಡಿಯೋ ಬಾಂಬ್‌ ಹೊರಹಾಕಿ ದ್ದರು. ಈ ಬಗ್ಗೆ ದೇವದುರ್ಗ ಠಾಣೆಯಲ್ಲಿ ಯಡಿಯೂರಪ್ಪ ಸೇರಿ ನಾಲ್ವರ ವಿರುದ್ಧ ದೂರು ದಾಖಲಾಗಿತ್ತು. ಪ್ರಕರಣದ ತನಿಖೆಗೆ ಮಧ್ಯಂತರ ತಡೆಯಾಜ್ಞೆಯನ್ನು ಯಡಿಯೂರಪ್ಪ ಪರ ವಕೀಲರು ಪಡೆದಿದ್ದರು. ಈ ತಡೆಯಾಜ್ಞೆ ತೆರವುಗೊಳಿಸುವಂತೆ ಶರಣಗೌಡ ಅರ್ಜಿ ಸಲ್ಲಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next