Advertisement

ಆಪರೇಷನ್‌ ಆಡಿಯೋ’ಸಿಎಂ ಮೊದಲ ಆರೋಪಿ

12:30 AM Feb 25, 2019 | Team Udayavani |

ಹುಬ್ಬಳ್ಳಿ: “ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಆಡಿಯೋ ಪ್ರಕರಣದಲ್ಲಿ ಸಿಎಂ ಕುಮಾರಸ್ವಾಮಿ ಆರೋಪಿ ಸ್ಥಾನದಲ್ಲಿ ನಿಲ್ಲುತ್ತಾರೆ. ಅವರು ಫೋನ್‌ ಕದ್ದಾಲಿಕೆ ಮಾಡಿದ್ದು, ಅವರೇ ಮೊದಲ ಆರೋಪಿ’ ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ್‌ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಡಿಯೋ ಪ್ರಕರಣದಲ್ಲಿ ಮೊದಲ ವಿಚಾರಣೆ ಎದುರಿಸಬೇಕಾಗಿದ್ದೆ ಸಿಎಂ ಕುಮಾರಸ್ವಾಮಿ. ಅದಕ್ಕಾಗಿ ಈ ಪ್ರಕರಣವನ್ನು ಎಸ್‌ಐಟಿಗೆ ವಹಿಸುವುದಿಲ್ಲವೆಂದು ಹೇಳಿದ್ದಾರೆ.

ಆದರೆ ಸಿಎಲ್‌ಪಿಸಿ ಅಧ್ಯಕ್ಷ ಸಿದ್ದರಾಮಯ್ಯ ಅವರು ಕುಮಾರಸ್ವಾಮಿ ಹಾಗೂ ಯಡಿಯೂರಪ್ಪ ಅವರನ್ನು ಗುರಿಯಾಗಿಸಿಕೊಂಡು ಪ್ರಕರಣವನ್ನು ಎಸ್‌ಐಟಿಗೆ ವಹಿಸುವಂತೆ ಒತ್ತಡ ಹೇರುತ್ತಿದ್ದಾರೆ ಎಂದರು. ಆಡಿಯೋ ಪ್ರಕರಣ ಎಸ್‌ಐಟಿಗೆ ವಹಿಸಬೇಕೋ, ಇಲ್ಲವೋ ಎಂಬುದು ಸಿಎಂ ವಿವೇಚನೆಗೆ ಬಿಟ್ಟಿದ್ದೇ ವಿನಃ ಗೃಹ ಸಚಿವರಿಗೆ ಅಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next