Advertisement
ಈಗ ಮತ್ತೆ ಭೇಟಿ ನೀಡಿ ಯಂತ್ರೋಪಕರಣಗಳ ಸ್ಥಿತಿಯ ಬಗ್ಗೆ ಪರಾಮರ್ಶೆ ನಡೆಸಿ, ಯಾವುದನ್ನು ಬದಲಾವಣೆ ಮಾಡಬೇಕು. ಹೊಸದಾಗಿ ಏನೆಲ್ಲಾ ಮಿಷನರಿಗಳ ನ್ನು ಅಳವಡಿಸಬೇಕು. ಆ ಬಿಡಿಭಾಗಗಳು ಸ್ಥಳೀ ಯವಾಗಿ ಸಿಗಲಿವೆಯೇ ಅಥವಾ ಹೊರಗಿನಿಂದ ತರಿಸಬೇಕೆ ಎಂಬ ಬಗ್ಗೆ ಸಂಪೂರ್ಣ ಮಾಹಿತಿ ಪಡೆ ದುಕೊಂಡು ಕಬ್ಬು ಅರೆಯುವಿಕೆ ಪ್ರಕ್ರಿಯೆ ಚಾಲನೆ ನೀಡುವುದಾಗಿ ಸೋಮವಾರ ಸುದ್ದಿಗೋಷ್ಠಿ ಯಲ್ಲಿ ಹೇಳಿದರು.
Related Articles
Advertisement
40 ವರ್ಷಕ್ಕೆ ಗುತ್ತಿಗೆ: ನಿರಾಣಿ ಗ್ರೂಪ್ ಸಕ್ಕರೆ ಕಾರ್ಖಾನೆಯನ್ನು ಖರೀದಿಸಿಲ್ಲ. 40 ವರ್ಷಗಳ ಅವ ಧಿಗೆ ಸರ್ಕಾರದಿಂದ ಗುತ್ತಿಗೆ ಪಡೆದಿದೆ. ನಿರಾಣಿ ಸಮೂಹ ಸಂಸ್ಥೆಗಳ ಸಕ್ಕರೆ ಕಾರ್ಖಾನೆಗಳಲ್ಲಿ 36 ಕೋಟಿ ಕಬ್ಬಿನ ಬಾಕಿ ಉಳಿಸಿಕೊಂಡಿರುವುದು ನಿಜ. ಅದನ್ನು ಮುಂದಿನ 1 ವಾರದೊಳಗೆ ಪಾವತಿಸುತ್ತೇವೆ. ಕಾರ್ಖಾನೆಗಳಿಗೆ ಸಾಲ ಪಡೆದಿ ರುವ ಬ್ಯಾಂಕ್ಗಳಿಗೆ ಹಣ ಮರುಪಾವತಿ ಮಾಡಿ ದ್ದೇನೆ. ಯಾವುದೇ ಬ್ಯಾಂಕುಗಳಿಗೂ ವಂಚನೆ ಮಾಡಿಲ್ಲ. ಮಾಜಿ ಸಿಎಂ ಸಿದ್ದರಾಮಯ್ಯ, ಕುಮಾರಸ್ವಾಮಿ ಮೆಚ್ಚುವಂತೆ ಕಾರ್ಖಾನೆ ಅಭಿವೃದಿ ಪಡಿಸುವುದಾಗಿ ತಿಳಿಸಿದರು.
ನೌಕರರನ್ನು ತೆಗೆಯುವ ವಿಚಾರ ಮಾಡಿಲ್ಲ: ಕಾರ್ಖಾನೆಯಲ್ಲಿರುವ ನೌಕರರನ್ನು ಕೆಲಸದಿಂದ ತೆಗೆಯುವ ಬಗ್ಗೆ ನಾನು ಯಾವುದೇ ವಿಚಾರ ಮಾಡಿಲ್ಲ. ಪರಿಣಿತರನ್ನು, ನಿಷ್ಠರನ್ನು ಉಳಿಸಿಕೊಳ್ಳಲಾಗುವುದು. ಕಾರ್ಖಾನೆ ಗುತ್ತಿಗೆ ಪಡೆಯುವ ವೇಳೆ 1 ಕೋಟಿ ರೂ. ಹಣ ಬಿಡ್ ಮಾಡಿದ್ದು, 5 ಕೋಟಿ ರೂ. ನಿಶ್ಚಿತ ಠೇವಣಿ ಇಡಲಾಗಿದೆ. 20 ಕೋಟಿ ರೂ. ಹಣವನ್ನು ಕಾರ್ಖಾನೆಗೆ ದುಡಿಯುವ ಬಂಡವಾಳವಾಗಿ ಭರಿಸಲಿದ್ದೇವೆ. ಕಾರ್ಮಿಕರ ಸಂಬಳ ಇದಕ್ಕಿಂತ ಹೆಚ್ಚಿದಲ್ಲಿ ಸರ್ಕಾರವೇ ಭರಿಸಬೇಕು ಎಂದು ಮುರುಗೇಶ್ ನಿರಾಣಿ ಹೇಳಿದರು.
ಪಾಂಡವಪುರ ಸಕ್ಕರೆ ಕಾರ್ಖಾನೆಯನ್ನು ಸಮರ್ಥವಾಗಿ ಮುನ್ನಡೆಸಲು ಬದ್ಧನಾಗಿದ್ದೇನೆ. ಎಲ್ಲರ ಸಹಕಾರ ಬೇಕು. ರೈತರು, ಜನರ ವಿಶ್ವಾಸದೊಂದಿಗೆ ಕಾರ್ಖಾನೆ ಮುನ್ನಡೆಸುವ ಬಯಕೆ ನನ್ನದು. ಇದನ್ನು ವಿರೋಧಿಸುವುದಾದರೆ ಕಾರ್ಖಾನೆ ಬಿಟ್ಟು ಹೊರನಡೆಯಲು ಸಿದ್ಧನಿದ್ದೇನೆ. -ಮುರುಗೇಶ್ ನಿರಾಣಿ, ನಿರಾಣಿ ಸಮೂಹ ಸಂಸ್ಥೆಗಳ ಅಧ್ಯಕ್ಷ