Advertisement

ಈರುಳ್ಳಿ ದರ ಇಳಿಕೆಗೆ ಇನ್ನೂ 1 ತಿಂಗಳು ಬೇಕು

09:54 AM Nov 08, 2019 | Hari Prasad |

ಹೊಸದಿಲ್ಲಿ: ಈರುಳ್ಳಿ ದಾಸ್ತಾನು ಕಡಿಮೆಯಾಗಿರುವುದಕ್ಕೆ ದರ ಏರಿಕೆಯಾಗಿದೆ. ಬೆಲೆ ಇಳಿಕೆಗೆ ಸರಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ಕೇಂದ್ರ ಆಹಾರ ಸಚಿವ ರಾಮ್‌ ವಿಲಾಸ್‌ ಪಾಸ್ವಾನ್‌ ತಿಳಿಸಿದ್ದಾರೆ.

Advertisement

ಮಾರುಕಟ್ಟೆಯಲ್ಲಿ ದಿಢೀರನೇ ಈರುಳ್ಳಿ ದರ ಕೇಜಿಗೆ 80 ರೂ. ತಲುಪಿದ ಹಿನ್ನೆಲೆಯಲ್ಲಿ ಇಲಾಖೆಯ ಉನ್ನತ ಅಧಿಕಾರಿಗಳೊಂದಿಗೆ ಬುಧವಾರ ಸಭೆ ನಡೆಸಿದ ಅವರು, ಕೆಲವು ರಾಜ್ಯಗಳಲ್ಲಿ ಮುಂಗಾರು ವಿಳಂಬ ಹಾಗೂ ಪ್ರವಾಹದಿಂದ ಶೇ.30-40 ಈರುಳ್ಳಿ ಉತ್ಪಾದನೆ ಇಳಿಕೆಯಾಗಿದೆ. ಹೀಗಾಗಿ ದರ ಹೆಚ್ಚಾಗಿದೆ. ಇದನ್ನು ತಗ್ಗಿಲು ಸರಕಾರ ಗರಿಷ್ಠ ಪರಿಣಾಮಕಾರಿ ಕ್ರಮ ಕೈಗೊಳ್ಳಲಿದೆ ಎಂದರು. ಯಾವಾಗ ದರ ಇಳಿಯುತ್ತದೆ ಎಂಬ ಪ್ರಶ್ನೆಗೆ ಭವಿಷ್ಯ ನುಡಿಯಲು ನಾನು ಜೋತಿಷಿ ಅಲ್ಲ. ನವೆಂಬರ್‌ ಅಂತ್ಯ ಇಲ್ಲವೇ ಡಿಸೆಂ ಬರ್‌ಗೆ ಬೆಲೆ ಇಳಿಯುವ ವಿಶ್ವಾಸವಿದೆ ಎಂದ‌ರು.

Advertisement

Udayavani is now on Telegram. Click here to join our channel and stay updated with the latest news.

Next