Advertisement

ಅಂಕೋಲಾ: ನಿಯಂತ್ರಣ ತಪ್ಪಿ ವಿದ್ಯುತ್‌ ಟ್ರಾನ್ಸ್‌ ಫಾರ್ಮರ್‌ ಗೆ ಗುದ್ದಿದ ಕಾರು; ಓರ್ವ ಸಾವು

07:15 PM Jul 04, 2022 | Team Udayavani |

ಅಂಕೋಲಾ : ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ವಿದ್ಯುತ್ ಟ್ರಾನ್ಸ್‌ ಫಾರ್ಮರ್‌ ಗೆ ಬಡಿದ ಪರಿಣಾಮ ಕಾರಿನಲ್ಲಿದ್ದ ಓರ್ವ ಮೃತಪಟ್ಟು, ನಾಲ್ವರಿಗೆ ಗಾಯವಾಗಿರುವ ಘಟನೆ ಹಾರವಾಡದ ರೈಲ್ವೆ ಬ್ರೀಜ್ ಬಳಿ ಸೋಮವಾರ ಸಂಜೆ ( ಜು. 4 ರಂದು) ನಡೆದಿದೆ.

Advertisement

ಆಂದ್ರಪ್ರದೇಶದ ಅನಂತಪುರದ ನಿವಾಸಿ, ವಿದ್ಯಾರ್ಥಿ ರವಿತೇಜ್ ಉಪ್ಪಾರ (21) ಮೃತ ವ್ಯಕ್ತಿ, ಕಾರು ಚಾಲಕ ಪವನ್ ಬಿ, ಬಾಲಚಂದ್ರ ಕೈತಾವರ, ಮೋಹನ ಸಾಯಿ, ಬೊಯೆಜ್ ಕುಮಾರ ಗಾಯಗೊಂಡವರು.

ಆಂದ್ರ ಪ್ರದೇಶದ ಜಿಮಿಟಿ ಕಾಲೇಜಿನ 10 ವಿದ್ಯಾರ್ಥಿಗಳು ಎರಡು ಕಾರಿನಲ್ಲಿ ಪ್ರವಾಸಕ್ಕೆಂದು ಬಂದಿದ್ದರು. ಸೋಮವಾರ ಬೆಳಿಗ್ಗೆ ಗೋಕರ್ಣವನ್ನು ವೀಕ್ಷಿಸಿ, ಸಂಜೆ ಅಂಕೋಲಾದಿಂದ ಗೋವಾದತ್ತ ಹೊರಟಿದ್ದರು. ಕಾರು ಅಂಕೋಲಾದ ಹಾರವಾಡದ ರೈಲ್ವೆ ಬ್ರೀಜ್ ಬಳಿ ಬರುತ್ತಿರುವಾಗ ಕಾರು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ ಗೆ ಢಿಕ್ಕಿ ಹೊಡೆದಿದೆ. ನಂತರ ಕಾರು ಪಲ್ಟಿಯಾಗಿ ವಿದ್ಯುತ್ ಟ್ರಾನ್ಸ್ ಫಾರ್ಮರ್ ಗೆ ಹೋಗಿ ಗುದ್ದಿದೆ.  ಕಾರಿಗೆ ಬೆಂಕಿ ತಗುಲಿ ಸುಟ್ಟು ಕರಕಲಾಗಿದೆ.  ಕಾರಿನಲ್ಲಿದ್ದ ರವಿತೇಜನಿಗೆ ವಿದ್ಯುತ್ ತಗುಲಿದೆ. ಗಾಯಗೊಂಡಿದ್ದ ರವಿತೇಜ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಕಾರು ಬೆಂಕಿಗೆ ಆಹುತಿಯಾಗುತ್ತಲ್ಲೇ ಕಾರಿನಲ್ಲಿದ್ದ ಇನ್ನು ನಾಲ್ವರು ಜಿಗಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಇದನ್ನೂ ಓದಿ: ಕಪ್ಪು ಬಲೂನ್ ಗಳ ಹಾರಾಟ: ವಿಜಯವಾಡದಲ್ಲಿ ಪ್ರಧಾನಿ ಮೋದಿ ಭದ್ರತೆಯಲ್ಲಿ ಲೋಪ

ಅಗ್ನಿಶಾಮಕ ದಳದ ಸಿಬ್ಬಂದಿಗಳು ಕೂಡಲೇ ಸ್ಥಳಕ್ಕಾಗಮಿಸಿ ಬೆಂಕಿ ನಿಂದಿಸಿದ್ದಾರೆ. ಘಟನಾ ಸ್ಥಳಕ್ಕೆ ಸಿಪಿಐ ಸಂತೋಷ ಶೆಟ್ಟಿ, ಪಿಎಸೈ ಪ್ರವೀಣಕುಮಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪಿಎಎಸೈ ಮಹಾಂತೇಶ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಜರುಗಿಸಿದ್ದಾರೆ.

Advertisement

ಮಾನವೀಯತೆ ಮೆರೆದ ಶಾಸಕಿ :

ಅಂಕೋಲಾದಲ್ಲಿ ಆಯೋಜಿಸಿದ್ದ ಕೆಡಿಪಿ ಸಭೆಗೆ ಶಾಸಕಿ ರೂಪಾಲಿ ನಾಯ್ಕ ಕಾರವಾರದಿಂದ ಅಂಕೋಲಾ ಕಡೆಗೆ ಆಗಮಿಸುತ್ತಿದ್ದರು. ಈ ವೇಳೆ ಅಘಘಾತವಾಗಿರವದನ್ನು ಕಂಡ ಶಾಸಕಿ ರೂಪಾಲಿ ನಾಯ್ಕ ಅವರು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿ ಮಾನವೀಯತೆ ಮೆರೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next