Advertisement
ದ.ಕ.ದಿಂದ 21 ಮಂದಿ ಭಾಗಿದಿಲ್ಲಿಯ ನಿಜಾಮುದ್ದೀನ್ ಧಾರ್ಮಿಕ ಸಮಾವೇಶದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ 21 ಮಂದಿ ಭಾಗವಹಿಸಿದ್ದಾರೆ. ಅವರನ್ನೆಲ್ಲ ತಪಾಸಣೆಗೆ ಒಳಪಡಿಸಲಾಗಿದ್ದು, ಆಸ್ಪತ್ರೆ ನಿಗಾದಲ್ಲಿ ಇರಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಬಹುತೇಕ ನ್ಯಾಯಬೆಲೆ ಅಂಗಡಿಗಳಲ್ಲಿ ಎಪ್ರಿಲ್-ಮೇ ತಿಂಗಳ ಪಡಿತರ ವಿತರಣೆ ಬುಧವಾರ ಆರಂಭವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆವಶ್ಯಕ ವಸ್ತು ಖರೀದಿಗೆ ಬೆಳಗ್ಗೆ 7ರಿಂದ 12ರವರೆಗೆ ಅವಕಾಶ ನೀಡಲಾಗಿದ್ದು, ನಿಯಮ ಪಾಲಿಸಿ ಖರೀದಿ ನಡೆದಿದೆ. ಗುರುವಾರವೂ ಇದು ಮುಂದುವರಿಯಲಿದೆ.
Related Articles
ಜಿಲ್ಲೆಯಲ್ಲಿ ಬುಧವಾರ 12 ಮಂದಿಗೆ ಕೋವಿಡ್ 19 ವೈರಸ್ ಸೋಂಕು ದೃಢಪಟ್ಟಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕು ಪೀಡಿತರ ಸಂಖ್ಯೆ 120ಕ್ಕೆ ಏರಿದೆ. ಒಟ್ಟಾರೆಯಾಗಿ ಕೇರಳದಲ್ಲಿ ಬುಧವಾರ 24 ಹೊಸ ಪ್ರಕರಣಗಳು ದೃಢವಾಗಿವೆ.
Advertisement