Advertisement

ನಿರ್ಣಾಯಕ ಪಂದ್ಯಗಳಲ್ಲಿ ಕಡಿಮೆ ಸ್ಕೋರ್ : ಟೀಕೆಗೆ ಕಪ್ತಾನ ಶರ್ಮಾ ಪ್ರತಿಕ್ರಿಯೆ

07:23 PM Nov 09, 2022 | Team Udayavani |

ಅಡಿಲೇಡ್: ಟಿ 20 ವಿಶ್ವಕಪ್ ಸೆಮಿ ಫೈನಲ್ ಪಂದ್ಯದಲ್ಲಿ ಗುರುವಾರ ಇಂಗ್ಲೆಂಡ್ ಅನ್ನು ಎದುರಿಸಲು ಸಜ್ಜಾಗಿರುವ ವೇಳೆ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರು ಪ್ರಮುಖ ಪಂದ್ಯಗಳಲ್ಲಿ ಗೇಮ್‌ಗಳಲ್ಲಿ ತಮ್ಮ ಕಡಿಮೆ ಸಂಖ್ಯೆಯ ಸ್ಕೋರ್ ಬಗ್ಗೆ ಟೀಕೆಗಳ ಕುರಿತು ಪ್ರತಿಕ್ರಿಯಿಸಿದ್ದಾರೆ.

Advertisement

ಪ್ರಮುಖ ಪಂದ್ಯಗಳಲ್ಲಿ ಅಂತಹ ಕಡಿಮೆ ಸ್ಕೋರ್ ಗಳು ನಿಮ್ಮನ್ನು ಕಾಡುತ್ತದೆಯೇ ಎಂದು ಕೇಳಿದಾಗ ರೋಹಿತ್ “ನಾನು ಮಾತ್ರವಲ್ಲ, ಎಲ್ಲಾ ಆಟಗಾರರು, ಅವರು ತಮ್ಮ ಇಡೀ ವೃತ್ತಿಜೀವನದಲ್ಲಿ ಏನು ಮಾಡಿದ್ದಾರೆ, ಒಂದು ನಾಕೌಟ್ ಪಂದ್ಯವು ಅವರನ್ನು ವ್ಯಾಖ್ಯಾನಿಸುವುದಿಲ್ಲ” ಎಂದಿದ್ದಾರೆ.

“ಇಡೀ ವರ್ಷ ನಾವು ಬಯಸಿದ ಸ್ಥಾನವನ್ನು ಪಡೆಯಲು ತುಂಬಾ ಶ್ರಮಿಸುತ್ತೇವೆ ಮತ್ತು ಯಾವುದೇ ಸ್ವರೂಪದಲ್ಲಿ ಆಡುತ್ತೇವೆ. ಆದ್ದರಿಂದ ಒಂದು ನಿರ್ದಿಷ್ಟ ಆಟವು ಅದನ್ನು ನಿರ್ಧರಿಸುವುದಿಲ್ಲ”ಎಂದರು.

ಇದನ್ನೂ ಓದಿ : ಟಿ20 ವಿಶ್ವಕಪ್‌ :ನ್ಯೂಜಿಲ್ಯಾಂಡ್‌ ಮಣಿಸಿ ಫೈನಲ್ ಗೆ ಲಗ್ಗೆ ಇಟ್ಟ ಪಾಕಿಸ್ಥಾನ

“ನಾಕೌಟ್ ಆಟಗಳು ಮುಖ್ಯವೆಂದು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ ಮತ್ತು ನೀವು ಉತ್ತಮವಾಗಿ ಆಡಿದರೆ ಅದು ನಿಮಗೆ ಅಪಾರ ವಿಶ್ವಾಸವನ್ನು ನೀಡುತ್ತದೆ. ಆದರೆ ಹಿಂದೆ ಏನಾಯಿತು, ಆಟಗಾರರು ಹಿಂದೆ ಏನು ಮಾಡಿದ್ದಾರೆ ಎಂಬುದನ್ನು ನಾವು ಮರೆಯುವುದಿಲ್ಲ. ವರ್ಷಗಳಿಂದ ತಂಡಕ್ಕಾಗಿ ನೀಡಿದ ಎಲ್ಲಾ ಪ್ರದರ್ಶನಗಳು, ಒಂದು ಆಟವನ್ನು ನಿರೂಪಣೆ ಮಾಡಲು ಸಾಧ್ಯವಿಲ್ಲ” ಎಂದಿದ್ದಾರೆ.

Advertisement

“ಇದು ಕೇವಲ ಒಂದು ಹಂತವಾಗಿದೆ. ಇದು ಟೂರ್ನಿಯ ಒಂದು ಹಂತವಷ್ಟೇ. ಅದರಲ್ಲಿ ಎರಡು ನಿರ್ಣಾಯಕ ಹಂತಗಳಿವೆ ಎಂದು ನಮಗೆ ತಿಳಿದಿದೆ” ಎಂದಿದ್ದಾರೆ.

ಬ್ಯಾಗೇಜ್ ಇಲ್ಲ

ಪಂದ್ಯಾವಳಿಯ ಚರ್ಚೆಯಾಗಿ ಮಾರ್ಪಟ್ಟಿರುವ ಸೂರ್ಯಕುಮಾರ್ ಯಾದವ್ ಅವರ ನಿರ್ಭೀತ ಬ್ಯಾಟಿಂಗ್ ವಿಧಾನದ ಬಗ್ಗೆ ಬ್ರಿಟಿಷ್ ಪತ್ರಕರ್ತರೊಬ್ಬರು ಕೇಳಿದಾಗ, ರೋಹಿತ್ ಅವರ ಉತ್ತರವು ಮಾಧ್ಯಮ ಕೊಠಡಿಯಲ್ಲಿ ನಗುವಿನ ಅಲೆಯಲ್ಲಿ ತೇಲಿಸಿತು. ”ಸೂರ್ಯನ ಬಳಿ ಶಾಪಿಂಗ್ ಬ್ಯಾಗೇಜ್ ಇದೆ ಆದರೆ ‘ಪ್ರೆಶರ್ ಬ್ಯಾಗೇಜ್’ ಇಲ್ಲ. ಇದು ಬಹುಶಃ ಅವರ ಸ್ವಭಾವ. ಸೂರ್ಯ ತನ್ನೊಂದಿಗೆ ಯಾವುದೇ ವಸ್ತುಗಳನ್ನು  ಕೊಂಡೊಯ್ಯದ  ರೀತಿಯ ವ್ಯಕ್ತಿ ಎಂದು ನಾನು ಭಾವಿಸುತ್ತೇನೆ” ಎಂದರು.

”ಸೂರ್ಯ ಅವರು ಆಡುವಾಗ ನೀವು ಅದನ್ನು ನೋಡಬಹುದು. ಹಾಗೆಂದು ಒಂದೆರಡು ಪಂದ್ಯಾವಳಿಗಳನ್ನು ಆಡಿದಂತಿಲ್ಲ.ಒಂದು ವರ್ಷದಿಂದ ಹಾಗೆ ಆಡುತ್ತಿದ್ದಾರೆ ಮತ್ತು ಅದು ತೋರಿ ಬರುತ್ತಿದೆ. ಅವರು ಯಾವ ರೀತಿಯ ಪಾತ್ರವನ್ನುನಿರ್ಣಯಿಸಬಹುದು ಹಾಗೇ ಆಡಲು ಇಷ್ಟಪಡುತ್ತಾರೆ ಎಂದು ಸೂರ್ಯ ಅವರ ಮನಸ್ಥಿತಿಯ ಬಗ್ಗೆ ರೋಹಿತ್ ಉತ್ತಮ ಒಳನೋಟವನ್ನು ನೀಡಿದರು.

ಹಲವು ವರ್ಷಗಳಿಂದ ಐಸಿಸಿ ಈವೆಂಟ್‌ಗಳಲ್ಲಿ ನಾಕೌಟ್ ಆಟಗಳಲ್ಲಿ ರೋಹಿತ್ ಭಾರತದ ಒಟ್ಟು ಮೊತ್ತದಲ್ಲಿ ಗಣನೀಯ ಕೊಡುಗೆ ನೀಡಲು ಹೆಣಗಾಡಿದ್ದು, 2014 ರ ವಿಶ್ವ ಟಿ 20 ಫೈನಲ್‌ನಲ್ಲಿ ಶ್ರೀಲಂಕಾ ವಿರುದ್ಧ 29 ರನ್ ಗಳಿಸಿದ್ದರು. 2015 ರ ಏಕದಿನ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ 34 ರನ್ ಗಳಿಸಿದ್ದರು. 2016 ರ ಟಿ 20 ವಿಶ್ವಕಪ್ ಸೆಮಿಫೈನಲ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 43 ರನ್ ಗಳಿಸಿದ್ದರು ಮತ್ತು 2017 ರ ಚಾಂಪಿಯನ್ಸ್ ಟ್ರೋಫಿ ಪ್ರಶಸ್ತಿ ಹಣಾಹಣಿಯಲ್ಲಿ ಪಾಕಿಸ್ಥಾನದ ವಿರುದ್ಧ ತಮ್ಮ ಖಾತೆಯನ್ನು ತೆರೆಯಲು ಸಹ ಸಾಧ್ಯವಾಗಿರಲಿಲ್ಲ.ನ್ಯೂಜಿಲ್ಯಾಂಡ್ ವಿರುದ್ಧದ 2019 ರ ಏಕದಿನ ವಿಶ್ವಕಪ್ ಸೆಮಿಫೈನಲ್‌ನಲ್ಲಿ, ರೋಹಿತ್ ಕೊಡುಗೆ ಕೇವಲ 1 ರನ್ ಆಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next