ನವದೆಹಲಿ: ಮಕರಸಂಕ್ರಾಂತಿ ಶುಭದಿನದಂದೇ ತೆಲಂಗಾಣದ ಸಿಖಂದರಾಬಾದ್ ಹಾಗೂ ಆಂಧ್ರಪ್ರದೇಶದ ವಿಶಾಖಪಟ್ಟಣಂ ನಡುವೆ ಸೇವೆ ಒದಗಿಸುವ ವಿಶಾಖಪಟ್ಟಣಂ-ಸಿಖಂದರಾಬಾದ್ ವಂದೇ ಭಾರತ್ ಎಕ್ಸ್ಪ್ರೆಸ್ (20833) ರೈಲು ಸಂಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹಸಿರು ನಿಶಾನೆ ತೋರಿದ್ದಾರೆ.
Advertisement
ಈ ಮೂಲಕ ದೇಶದಲ್ಲಿ ವಂದೇ ಭಾರತ್ನ 8ನೇ ರೈಲು ಪ್ರಯಾಣ ಆರಂಭಿಸಿದಂತಾಗಿದೆ. ವರ್ಚುವಲ್ ಮೂಲಕ ರೈಲು ಉದ್ಘಾಟನೆ ನಡೆಸಿ, ವಂದೇ ಭಾರತ್ ರೈಲುಗಳು ಆತ್ಮನಿರ್ಭರ ಭಾರತದ ಪ್ರತೀಕ ಎಂದು ಪ್ರಧಾನಿ ಹೇಳಿದ್ದಾರೆ.
ಇದನ್ನೂ ಓದಿ: ಸುರತ್ಕಲ್ ಗುಡ್ಡ ಕುಸಿತ ಪ್ರಕರಣ: ಗುತ್ತಿಗೆದಾರ, ಸೂಪರ್ವೈಸರ್ ವಿರುದ್ಧ ಕೇಸು, ಬಂಧನ