Advertisement

ವಂದೇ ಭಾರತ್‌ 8ನೇ ರೈಲು ಲೋಕಾರ್ಪಣೆ: ಸಿಖಂದರಾಬಾದ್‌ –ವಿಶಾಖಪಟ್ಟಣಂ ನಡುವೆ ಸಂಚಾರ

08:59 PM Jan 15, 2023 | Team Udayavani |

ನವದೆಹಲಿ: ಮಕರಸಂಕ್ರಾಂತಿ ಶುಭದಿನದಂದೇ ತೆಲಂಗಾಣದ ಸಿಖಂದರಾಬಾದ್‌ ಹಾಗೂ ಆಂಧ್ರಪ್ರದೇಶದ ವಿಶಾಖಪಟ್ಟಣಂ ನಡುವೆ ಸೇವೆ ಒದಗಿಸುವ ವಿಶಾಖಪಟ್ಟಣಂ-ಸಿಖಂದರಾಬಾದ್‌ ವಂದೇ ಭಾರತ್‌ ಎಕ್ಸ್‌ಪ್ರೆಸ್‌ (20833) ರೈಲು ಸಂಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹಸಿರು ನಿಶಾನೆ ತೋರಿದ್ದಾರೆ.

Advertisement

ಈ ಮೂಲಕ ದೇಶದಲ್ಲಿ ವಂದೇ ಭಾರತ್‌ನ 8ನೇ ರೈಲು ಪ್ರಯಾಣ ಆರಂಭಿಸಿದಂತಾಗಿದೆ. ವರ್ಚುವಲ್‌ ಮೂಲಕ ರೈಲು ಉದ್ಘಾಟನೆ ನಡೆಸಿ, ವಂದೇ ಭಾರತ್‌ ರೈಲುಗಳು ಆತ್ಮನಿರ್ಭರ ಭಾರತದ ಪ್ರತೀಕ ಎಂದು ಪ್ರಧಾನಿ ಹೇಳಿದ್ದಾರೆ.

ಇದನ್ನೂ ಓದಿ: ಸುರತ್ಕಲ್‌ ಗುಡ್ಡ ಕುಸಿತ ಪ್ರಕರಣ: ಗುತ್ತಿಗೆದಾರ, ಸೂಪರ್‌ವೈಸರ್‌ ವಿರುದ್ಧ ಕೇಸು, ಬಂಧನ

Advertisement

Udayavani is now on Telegram. Click here to join our channel and stay updated with the latest news.

Next