Advertisement

ರೈತರು ನನಗಾಗಿ ಸಾವನ್ನಪ್ಪಿದ್ದಾರೆಯೇ ಎಂದು ಪ್ರಧಾನಿ ಮೋದಿ ಕೇಳಿದ್ರು: ಮೇಘಾಲಯ ರಾಜ್ಯಪಾಲ

03:15 PM Jan 03, 2022 | Team Udayavani |

ನವದೆಹಲಿ: ರೈತರ ಸಮಸ್ಯೆಗಳ ಕುರಿತು ಚರ್ಚಿಸುವ ನಿಟ್ಟಿನಲ್ಲಿ ನಾನು ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿದ್ದೆ, ಆದರೆ ಐದು ನಿಮಿಷಗಳ ಮಾತುಕತೆಯಲ್ಲೇ ಅವರೊಬ್ಬ ಗರ್ವದ ವ್ಯಕ್ತಿ ಎಂಬುದು ಗೊತ್ತಾಯ್ತು ಎಂದು ಮೇಘಾಲಯ ಗವರ್ನರ್ ಸತ್ಯ ಪಾಲ್ ಮಲಿಕ್ ಹೇಳಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ ಎಂದು ವರದಿ ತಿಳಿಸಿದೆ.

Advertisement

ಭಾನುವಾರ(ಜನವರಿ 02) ಹರ್ಯಾಣದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದ ಗವರ್ನರ್ ಮಲಿಕ್, ಅವರೊಬ್ಬ (ಪ್ರಧಾನಿ) ಅಹಂಕಾರಿ ವ್ಯಕ್ತಿಯಾಗಿದ್ದಾರೆ. ಪ್ರತಿಭಟನೆಯಲ್ಲಿ ನಮ್ಮ 500 ಮಂದಿ ರೈತರು ಸಾವನ್ನಪ್ಪಿದ್ದರು ಎಂದು ಮಾತುಕತೆ ವೇಳೆ ಪ್ರಧಾನಿಗೆ ತಿಳಿಸಿದ್ದೆ, ಅವರು ನನಗಾಗಿ ಸತ್ತಿದ್ದಾರೆಯೇ ಎಂದು ಪ್ರಶ್ನಿಸಿರುವುದಾಗಿ ಮಲಿಕ್ ತಿಳಿಸಿದ್ದಾರೆ.

ಅದಕ್ಕೆ ನಾನು ಹೌದು ಎಂದು ಉತ್ತರಿಸಿದ್ದೆ, ಎಲ್ಲಿಯವರೆಗೆ ನೀವು ದೊರೆ(ಪ್ರಧಾನಿ)ಯಾಗಿರುತ್ತೀರೋ ಎಂದು ಹೇಳಿದ್ದೆ. ಆದರೆ ನಂತರ ನಾನು ಅವರೊಂದಿಗೆ ಹೆಚ್ಚು ಚರ್ಚೆ ಮಾಡಲು ಹೋಗಲಿಲ್ಲ. ನಂತರ ಅವರು (ಪ್ರಧಾನಿ ಮೋದಿ) ನನಗೆ ಅಮಿತ್ ಶಾ ಭೇಟಿಯಾಗುವಂತೆ ಹೇಳಿದರು. ಅದರಂತೆ ನಾನು ಶಾ ಅವರನ್ನು ಭೇಟಿಯಾಗಿದ್ದೆ ಎಂದು ಗವರ್ನರ್ ಸತ್ಯಪಾಲ್ ಮಲಿಕ್ ಹೇಳಿದ್ದಾರೆ.

ಕಾಂಗ್ರೆಸ್ ಪಕ್ಷ ಸತ್ಯಪಾಲ್ ಮಲಿಕ್ ಅವರ ವಿಡಿಯೋವನ್ನು ಕಾಂಗ್ರೆಸ್ ಟ್ವೀಟರ್ ಖಾತೆಯಲ್ಲಿ ಶೇರ್ ಮಾಡಿದ್ದು, ಭಾರತೀಯ ಜನತಾ ಪಕ್ಷದ ಗವರ್ನರ್ ಅವರ ಹೇಳಿಕೆ ಪ್ರಕಾರ, ಪ್ರಧಾನಿ ಮೋದಿ ಅವರ ಗುಣಗಳನ್ನು ಅವರು ಬಹಿರಂಗಗೊಳಿಸಿದ್ದಾರೆ. ಇದು ಪ್ರಜಾಪ್ರಭುತ್ವಕ್ಕೆ ಕಳವಳಕಾರಿಯಾಗಿದೆ ಎಂದು ತಿರುಗೇಟು ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next