Advertisement

ಪುತ್ತೂರು:ಬಸ್‌-ಆಮ್ನಿ ಢಿಕ್ಕಿ;ಓರ್ವ ಸಾವು,ನಾಲ್ವರು ಗಂಭೀರ 

01:28 PM Nov 18, 2017 | |

ಪುತ್ತೂರು: ಇಲ್ಲಿನ ಇಚ್ಲಂಪಾಡಿ ಬಳಿ ಖಾಸಗಿ ಬಸ್‌ ಮತ್ತು ಆಮ್ನಿ ನಡುವೆ ಶನಿವಾರ ಭೀಕರ ಅಪಘಾತ ಸಂಭವಿಸಿದ್ದು, ದುರ್ಘ‌ಟನೆಯಲ್ಲಿ ಆಮ್ನಿಯಲ್ಲಿದ್ದ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದರೆ, ಇತರ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.

Advertisement

ಬೆಂಗಳೂರಿನಿಂದ ಯಾತ್ರಿಗಳನ್ನು ಸುಬ್ರಹ್ಮಣ್ಯಕ್ಕೆ ಕರೆದೊಯ್ಯುತ್ತಿದ್ದ ಬಸ್‌ ಗೆ ಆಮ್ನಿ ಢಿಕ್ಕಿಯಾಗಿದೆ. ಆಮ್ನಿಯಲ್ಲಿದ್ದ ಕಾರ್ಕಳ ಮೂಲದ ಸಂದೇಶ್‌ ಎನ್ನುವವರು ಸಾವನ್ನಪ್ಪಿದ್ದು ,ನಾಲ್ವರು ಗಾಯಾಳುಗಳನ್ನುಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬಸ್‌ ಅಪಘಾತದ ತೀವ್ರತೆಗೆ ಬಸ್‌ ರಸ್ತೆ ಪಕ್ಕದ ಕಮರಿಗೆ ಜಾರಿತ್ತು, ಬಸ್‌ನಲ್ಲಿದ್ದ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಉಪ್ಪಿನಂಗಡಿ ಪೊಲೀಸರು ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಹೆಚ್ಚಿನ ವಿವರ ನಿರೀಕ್ಷಿಸಲಾಗುತ್ತಿದೆ. 

Advertisement

Udayavani is now on Telegram. Click here to join our channel and stay updated with the latest news.

Next