Advertisement

ದನ ಕಟ್ಟಲು ಹೋಗಿ ಪ್ರವಾಹದಲ್ಲಿ ಸಿಲುಕಿಕೊಂಡ ವೃದ್ಧ: ಸ್ಥಳೀಯರಿಂದ ರಕ್ಷಣೆ

09:27 AM Aug 10, 2019 | keerthan |

ಬೆಳ್ತಂಗಡಿ: ಇಲ್ಲಿನ ನೆರಿಯ ಗ್ರಾಮದ ಕಾಟಾಜೆಯಲ್ಲಿ ಪ್ರವಾಹದಲ್ಲಿ ಸಿಲುಕಿ ಹಾಕಿಕೊಂಡಿದ್ದ ವೃದ್ಧರೋರ್ವರನ್ನು ಸ್ಥಳೀಯರು ಸೇರಿ ರಕ್ಷಿಸಿದ ಘಟನೆ ಶುಕ್ರವಾರ ನಡೆದಿದೆ.

Advertisement

ಬೆಳ್ತಂಗಡಿ ತಾಲೂಕಿನ ಅಣಿಯೂರು ಗ್ರಾಮದ ಕಾಟಾಜೆ ನಿವಾಸಿ ಡೀಕಯ್ಯ ಗೌಡ ಅವರು ರಕ್ಷಿಸಲ್ಪಟ್ಟವರು.

ಅಣಿಯೂರು ಹೊಳೆಯಲ್ಲಿ ನೆರೆ ನೀರು ಸ್ವಲ್ಪ ತಗ್ಗಿದ ಕಾರಣ ಅವರು ನದಿ ಪಾತ್ರದ ಬೈಲು ಗದ್ದೆಯಲ್ಲಿ ದನ ಕಟ್ಟಲು ಹೋಗಿದ್ದರು. ಆದರೆ ಈ ವೇಳೆ ಏಕಾಏಕಿ ಪ್ರವಾಹದ ನೀರು ಬಂದ ಕಾರಣ ಡೀಕಯ್ಯ ಗೌಡ ಅವರು ಮಧ್ಯದಲ್ಲಿ ಸಿಲುಕಿ ಹಾಕಿಕೊಂಡರು. ನಂತರ ಅವರ ಮಗ ಅವರನ್ನು ಸುರಕ್ಷಿತವಾಗಿ ದಡಕ್ಕೆ ಕರೆದುಕೊಂಡ ಘಟನೆ ನಡೆಯಿತು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next