Advertisement

11 ಜನ ಮಕ್ಕಳಿದ್ದರೂ ದಯಾಮರಣ ಕೋರಿ ರಾಷ್ಟ್ರಪತಿಗೆ ವೃದ್ಧ ತಾಯಿ ಮನವಿ

11:47 PM Sep 22, 2022 | Team Udayavani |

ಹಾವೇರಿ: ಹನ್ನೊಂದು ಜನ ಮಕ್ಕಳಿದ್ದರೂ ನನ್ನನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ. ಪತಿಯ ಆಸ್ತಿಯಲ್ಲೂ ಪಾಲು ಕೊಟ್ಟಿಲ್ಲ. ಇದರಿಂದ ಜೀವನವೇ ಬೇಸರವಾಗಿದೆ. ಹಾಗಾಗಿ  ದಯಾಮರಣಕ್ಕೆ ಅವಕಾಶ ನೀಡಬೇಕೆಂದು ಕೋರಿ ರಾಣೆಬೆನ್ನೂರಿನ 78 ವರ್ಷದ  ಪುಟ್ಟವ್ವ  ಎಂಬವರು ಗುರುವಾರ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದ್ದಾರೆ.

Advertisement

7  ಗಂಡು, 4   ಹೆಣ್ಣು ಮಕ್ಕಳಿದ್ದರೂ ಒಬ್ಬರೂ ಸರಿಯಾಗಿ ನೋಡಿಕೊಳ್ಳುತ್ತಿಲ್ಲ. 25 ಎಕರೆ ಆಸ್ತಿಯಿದ್ದು, ಪಾಲು ನೀಡಲು ಒಪ್ಪುತ್ತಿಲ್ಲ. ಇದರಿಂದ ಜೀವನ ಸಾಗಿಸುವುದೇ ಕಷ್ಟವಾಗಿದೆ. ಅಕ್ಕಪಕ್ಕದ ಮನೆಯವರಿಂದ ಊಟೋಪಹಾರ ಪಡೆಯುವಂತಾಗಿದ್ದು,  ಜೀವನವೇ ಸಾಕಾಗಿ ಹೋಗಿದೆ ಎಂದು ಕಣ್ಣೀರಿಟ್ಟರು. ಬಳಿಕ ಜಿಲ್ಲಾ ಧಿಕಾರಿಗಳ ಮೂಲಕ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ದಯಾಮರಣ ಕೋರಿ ಮನವಿ ಸಲ್ಲಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next