Advertisement

ಚಾಮುಂಡೇಶ್ವರಿಯಲ್ಲಿ ಸಿಎಂ ಪರ ಒಕ್ಕಲಿಗ ಮುಖಂಡರ ಪ್ರೆಸ್‌ಮೀಟ್‌!

03:36 PM Apr 03, 2018 | |

ಚಾಮುಂಡೇಶ್ವರಿ: ಮಾಜಿ ಸಚಿವ , ಜಿ.ಟಿ.ದೇವೇಗೌಡ ಅವರ ಎದುರು ಜಯ ಗಳಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ದಿನಕ್ಕೊಂದರಂತೆ ರಣತಂತ್ರಗಳನ್ನು ಹಣೆಯುತ್ತಿದ್ದು, ಇದಕ್ಕೆ ಜಾತಿ ರಾಜಕೀಯವೂ ಸೇರ್ಪಡೆಯಾಗಿದೆ.

Advertisement

ಒಕ್ಕಲಿಗ ಸಮಾಜದ ಕೆಲ ಮುಖಂಡರು ಇಂದು ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಬೆಂಬಲ ಸೂಚಿಸಿದರು. 

ಸಭೆಯಲ್ಲಿ ಭಾಗಿಯಾಗಿದ್ದ ಕಾಂಗ್ರೆಸ್‌ ಸೇರ್ಪಡೆಯಾಗಿರುವ ಸತ್ಯನಾರಾಯಣ ಅವರು ಸಿದ್ದರಾಮಯ್ಯ ಅವರನ್ನು ಗಾಂಧೀಜಿಗೆ ಹೋಲಿಸಿದರು. ಗಾಂಧೀಜಿ ಅವರು ಎಲ್ಲಾ ಜನಾಂಗದ ನಾಯಕರಾಗಿದ್ದರು ಅವರ ಹಾಗೆ ಸಿದ್ದರಾಮಯ್ಯ ಕೂಡ ಎಲ್ಲಾ ಜನಂಗಾಕ್ಕೂ ಹಣ ಬಿಡುಗಡೆ ಮಾಡಿದ್ದಾರೆ .ಅವರನ್ನು ಜನರು ಗೆಲ್ಲಿಸಬೇಕು ಎಂದು ಕರೆ ನೀಡಿದರು. 

ಜೆಡಿಎಸ್‌ನಿಂದ ಕಾಂಗ್ರೆಸ್‌ ಸೇರ್ಪಡೆಯಾಗಿದ್ದ ಸಿದ್ದೇಗೌಡ ಅವರು ಮಾತನಾಡಿ ಜಿ.ಟಿ.ದೇವೇಗೌಡ ಅವರಿಗೂ ಸಿದ್ದರಾಮಯ್ಯ ಅವರಿಗೂ ಎಲ್ಲಾ ವಿಚಾರಗಳಲ್ಲೂ ಅಜಗಜಾಂತರ. ವ್ಯಕ್ತಿತ್ವ, ರಾಜೀಯ ಕ್ಷೇತ್ರದಲ್ಲೂ ಅಜಗಜಾಂತರ ಎಂದರು.

ಕಾಂಗ್ರೆಸ್‌ ನಾಯಕಿ ಮಂಜುಳಾ ಮಾನಸ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಜಾಮುಂಡೇಶ್ವರಿ ಜನತೆ ಯಾವತ್ತೂ ಜಾತಿ ರಾಜಕೀಯ ಮಾಡಲಿಲ್ಲ. ಒಕ್ಕಲಿಗರು ಸಿಎಂ ಪರ ನಿಲ್ಲುತ್ತಾರೆ ಎಂದರು.

Advertisement

ಸಾಮಾಜಿಕ ತಾಣಗಳಲ್ಲಿ ಭಾರೀ ಚರ್ಚೆ 

ಕ್ಷೇತ್ರದಲ್ಲಿ ಒಕ್ಕಲಿಗರೂ ಸಂಪೂರ್ಣವಾಗಿ ಜಿಟಿಡಿ ಅವರ ಬೆಂಬಲಕ್ಕೆ ನಿಲ್ಲಲಿದ್ದು ಸಿಎಂ ಸಿದ್ದರಾಮಯ್ಯ ಸೋಲು ಖಚಿತ ಎನ್ನುವ ಬರಹಗಳು ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿದ್ದು ಆ ಬೆನ್ನಲ್ಲೇ ಈ ಸಭೆ ನಡೆದಿದೆ. 

Advertisement

Udayavani is now on Telegram. Click here to join our channel and stay updated with the latest news.

Next