Advertisement

ಮಂಗಳೂರು : ಹಡಗಿನಿಂದ ತೈಲ ಸೋರಿಕೆ ಭೀತಿ : ವಿಮಾನದ ಮೂಲಕ ಕಣ್ಗಾವಲು

07:23 AM Jun 27, 2022 | Team Udayavani |

ಉಳ್ಳಾಲ/ ಮಂಗಳೂರು : ಉಚ್ಚಿಲದ ಬಟ್ಟಪ್ಪಾಡಿ ಬಳಿ ಸಮುದ್ರದಲ್ಲಿ ಮುಳುಗಿರುವ ಸಿರಿಯಾದ ಹಡಗಿನಲ್ಲಿರುವ 220 ಮೆಟ್ರಿಕ್‌ ಟನ್‌ ತೈಲ ಸೋರಿಕೆಯಾಗುವ ಆತಂಕದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹೈ ಅಲರ್ಟ್‌ ಆಗಿದ್ದು, ಕೋಸ್ಟ್‌ಗಾರ್ಡ್‌ ನೌಕೆ ಹಾಗೂ ಹೆಲಿಕಾಪ್ಟರ್‌ಗಳು ಕಣ್ಗಾವಲು ನಡೆಸುತ್ತಿವೆ. ರವಿವಾರ ಇಂಡಿಯನ್‌ ಕೋಸ್ಟ್‌ಗಾರ್ಡ್‌ನ ಮಿನಿ ಜೆಟ್‌ ವಿಮಾನ ಮಾನಿಟರಿಂಗ್‌ ಕಾರ್ಯ ಆರಂಭಿಸಿದೆ.

Advertisement

ಕೇಂದ್ರದ ತನಿಖಾ ದಳದಿಂದ ತನಿಖೆ
ಮಲೇಶ್ಯಾದಿಂದ ಲೆಬನಾನ್‌ಗೆ ಉಕ್ಕಿನ ಕಾಯಿಲ್‌ಗ‌ಳನ್ನು ಸಾಗಿಸುತ್ತಿದ್ದ ನೌಕೆ ಸಮುದ್ರ ಮಧ್ಯದಿಂದ ತೀರದ ಬಳಿ ಸಾಗುತ್ತಾ ಉಳ್ಳಾಲದ ಬಟ್ಟಪಾಡಿಗೆ ಬಂದಿರುವುದು ಯಾಕೆ ಎಂಬ ಪ್ರಶ್ನೆ ಇನ್ನೂ ಉಳಿದುಕೊಂಡಿದೆ. ತಾಂತ್ರಿಕ ದೋಷ ಮತ್ತು ರಂಧ್ರ ಕಂಡು ಬಂದ ಕೂಡಲೇ ದುರಸ್ತಿಗಾಗಿ ನೌಕೆಯನ್ನು ಕ್ಯಾಪ್ಟನ್‌ ನವಮಂಗಳೂರು ಬಂದರಿನ ಆ್ಯಂಕರೇಜ್‌ ಮತ್ತು ಮಂಗಳೂರು ಹಳೇಬಂದರಿಗೆ ತರಲು ಪ್ರಯತ್ನಿಸಿದ್ದರೂ ಅನುಮತಿ ಸಿಕ್ಕಿರಲಿಲ್ಲ. ಆ ಕಾರಣ ಉಳ್ಳಾಲದತ್ತ ಹಡಗನ್ನು ಕೊಂಡೊಯ್ಯಲಾಗಿದೆ ಎನ್ನಲಾಗುತ್ತಿದೆ. ಆದರೆ ಸ್ಪಷ್ಟ ಕಾರಣ ಗೊತ್ತಾಗಿಲ್ಲ. ಈ ಬಗ್ಗೆ ಈ ಬಗ್ಗೆ ಇಂಡಿಯನ್‌ ಕೋಸ್ಟ್‌ಗಾರ್ಡ್‌ ಜತೆ ಕೇಂದ್ರದ ತನಿಖಾ ದಳದಿಂದ ತನಿಖೆಯಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next