Advertisement

ಆಸ್ಕರ್ ನಲ್ಲಿ ಭಾರತವನ್ನು ಪ್ರತಿನಿಧಿಸಲಿದೆ ತಮಿಳಿನ “ಕೂಳಾಂಗಲ್” ಸಿನಿಮಾ

06:28 PM Oct 26, 2021 | Team Udayavani |

ನವದೆಹಲಿ: 2020ರ ಆಸ್ಕರ್ ಪ್ರಶಸ್ತಿಗೆ ಅತ್ತ್ಯುತ್ತಮ ಅಂತಾರಾಷ್ಟ್ರೀಯ ಫಿಲ್ಮ್” ಕೆಟಗರಿಯಲ್ಲಿ ಸ್ಪರ್ಧಿಸಲು  ಭಾರತದಿಂದ ತಮಿಳು ಚಿತ್ರ ಕೂಳಾಂಗಳ್ ಚಿತ್ರ ಅಧಿಕೃತವಾಗಿ ಆಯ್ಕೆಯಾಗಿದೆ.

Advertisement

ಒಂದು ಸಿನಿಮಾ ಎಂದರೆ ಅದು ಕೇವಲ ದೃಶ್ಯ ರೂಪ ಆಗಿರುವುದಿಲ್ಲ. ಬದಲಾಗಿ ಚಿತ್ರದಲ್ಲಿ ಬರುವ ಪಾತ್ರ, ಸನ್ನಿವೇಶಗಳು ಕೆಲವೊಮ್ಮೆ ಮುನಷ್ಯನ ನಿಜ ಜೀವನದಲ್ಲಿ ಹಾಸು ಹೊಕ್ಕಾಗುರುತ್ತದೆ. ಇಂತಹದೊಂದು ಸಿನಿಮಾ ಕೂಳಾಂಗಲ್.

ಕೂಳಾಂಗಳ್ ಎಂದರೆ ನದಿಯ ಪಕ್ಕದಲ್ಲಿ ಇರುವ ಬೆಣಚುಕಲ್ಲು ಎಂದರ್ಥ.  ಚಿತ್ರದ ಶೀರ್ಷಿಕೆಗೂ, ಸಿನುಮಾದಲ್ಲಿ ಬರುವ ಸನ್ನಿವೇಶಗಳಿಗೂ ಸಂಬಂಧ ಇದ್ದು, ಇದನ್ನು ಬಹಳ ಅಚ್ಚುಕಟ್ಟಾಗಿ ಚಿತ್ರದಲ್ಲಿ ಸೆರೆಹಿಡಿಯಲಾಗಿದೆ.

ಈ ಚಿತ್ರವನ್ನು ಪಿ.ಎಸ್ ವಿನೋದ್ ರಾಜ್ ನಿರ್ದೇಶನ ಮಾಡಿದ್ದು, ನಟಿ ನಯನ ತಾರ ಹಾಗೂ ಪತಿ ವಿಘ್ನೇಶ್ ಶಿವನ್ ತಮ್ಮ ರೌಡಿ ಬ್ಯಾನರ್ಸ್‍ನಲ್ಲಿ ನಿರ್ಮಿಸಿದ್ದಾರೆ.

ಇದನ್ನೂ ಓದಿ: ಬೆಳಗಾವಿ ಜಿಲ್ಲೆಯ ವಿಧವೆಯರಿಗೆ 8 ಸಾವಿರ ಮನೆ ಮಂಜೂರು- ಕವಟಗಿಮಠ

Advertisement

ಮಲಯಾಳಂನ ‘ನಾಯಟ್ಟು’, ವಿದ್ಯಾ ಬಾಲನ್​ ನಟನೆಯ ‘ಶೇರ್ನಿ’, ಯೋಗಿ ಬಾಬು ಅಭಿನಯದ ತಮಿಳಿನ ‘ಮಂಡೆಲಾ’ ‘ಕೂಜಂಗಲ್’, ವಿಕ್ಕಿ ಕೌಶಲ್​ ನಟನೆಯ ‘ಸರ್ದಾರ್ ಉದ್ಧಮ್​’, ಅಸ್ಸಾಮಿ ಭಾಷೆಯ ‘ಬ್ರಿಡ್ಜ್​’, ಗುಜರಾತಿಯ ‘ಚೆಲ್ಲೋ ಶೋ’ ಸೇರಿದಂತೆ ಒಟ್ಟು 14 ಸಿನಿಮಾಗಳು ರೇಸ್​ನಲ್ಲಿದ್ದವು. ಈ ಪೈಕಿ ಕೊಳಂಗಾಲ್ ಚಿತ್ರ ಅಧಿಕೃತವಾಗಿ ಆಯ್ಕೆಯಾಗಿದೆ.

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next