Advertisement

ಮಂಚೇನಹಳ್ಳಿ ತಾಲೂಕಾಗಿ ಅಧಿಕೃತ ಘೋಷಣೆ

05:51 PM May 25, 2022 | Team Udayavani |

ಚಿಕ್ಕಬಳ್ಳಾಪುರ: ಜಿಲ್ಲೆಯ ಗೌರಿಬಿದನೂರು ತಾಲೂಕಿನ ಮಂಚೇನಹಳ್ಳಿ ಹೋಬಳಿಯನ್ನು ಕೊನೆಗೂ ಸರ್ಕಾರ ಅಧಿಕೃತವಾಗಿ ತಾಲೂಕು ಕೇಂದ್ರವಾಗಿ ಘೋಷಣೆ ಮಾಡಿ ಅಧಿಸೂಚನೆ ಹೊರಡಿಸಿದೆ.

Advertisement

ಗೌರಿಬಿದನೂರು ತಾಲೂಕಿನ ಮಂಚೇನಹಳ್ಳಿ ಹೋಬಳಿ ರಾಯನಕಲ್ಲು, ಮಿನಕನಗುರ್ಕಿ, ಶಾಂಪುರ, ವರವಾಣಿ, ಪುರಗ್ರಾಮ, ಬಿಸಿಲಹಳ್ಳಿ, ಹಳೇಹಳ್ಳಿ, ಗುಯ್ನಾಲ, ಉಪ್ಪಾರಹಳ್ಳಿ, ಜರಬಂಡಹಳ್ಳಿ ವೃತ್ತಗಳು ಮತ್ತು ಏಳು ಗ್ರಾಪಂ ಗಳು ಸೇರಿ ಮಂಚೇನಹಳ್ಳಿಯನ್ನು ತಾಲೂಕು ಕೇಂದ್ರವಾಗಿ ಸರ್ಕಾರ ಘೋಷಣೆ ಮಾಡಿದೆ.

ರಾಯನಕಲ್ಲು ವೃತ್ತದ ವ್ಯಾಪ್ತಿಯಲ್ಲಿ ರಾಯನಕಲ್ಲು, ಪೆದ್ದರಡ್ಡಿ ನಾಗೇನಹಳ್ಳಿ(ಮಜರೆ), ದಂಡಿಗಾನಹಳ್ಳಿ, ಹೊಸಹಳ್ಳಿ, ಕಂಬದಾನಹಳ್ಳಿ (ಮಜರೆ), ಕಣಗಾಣ ಕೊಪ್ಪ, ಮಂಚೇನಹಳ್ಳಿ, ಬಂಡಿರಾಮನಹಳ್ಳಿ (ಮಜರೆ), ಮಿನಕ ನಗುರ್ಕಿ ವೃತ್ತದಲ್ಲಿ ಎಂ ಗುಂಡ್ಲಹಳ್ಳಿ (ಮಜರೆ), ಮೈಲ ಗಾನಹಳ್ಳಿ (ಮಜರೆ), ಹೆಗ್ಗೇನಹಳ್ಳಿ, ಎಂ.ನಾಗೇನ ಹಳ್ಳಿ, ಶಾಂಪುರ ಗ್ರಾಮಲೆಕ್ಕಾಧಿಕಾರಿ ವೃತ್ತದಲ್ಲಿ ಶಾಂಪುರ, ಗುಣಿಬೀಳು (ಮಜರೆ), ಸಾದೇನಹಳ್ಳಿ (ಮಜರೆ), ಕಾಮಗಾನಹಳ್ಳಿ (ಮಜರೆ), ಅದ್ದೆಕೊಪ್ಪ, ಗೌಡಗೆರೆ, ವರವಾಣಿ ಗ್ರಾಮ ಲೆಕ್ಕಾಧಿಕಾರಿ ವೃತ್ತದಲ್ಲಿ ವರವಾಣಿ, ಹೊನ್ನಪ್ಪನಹಳ್ಳಿ (ಮಜರೆ), ಕಾಟನಾಗೆನ ಹಳ್ಳಿ (ಮಜರೆ), ಗಿಡ್ಡಗಾನಹಳ್ಳಿ,
ಪುರ ಗ್ರಾಮ ಲೆಕ್ಕಾ ಧಿಕಾರಿ ವೃತ್ತದಲ್ಲಿ ಪುರ, ಭಕ್ತರಹಳ್ಳಿ (ಮಜರೆ), ಅರಕುಂದ, ಅರಸಲಬಂಡೆ, ಪಿ.ನಾಗೇನಹಳ್ಳಿ, ಕೊಡಿಗಾನಹಳ್ಳಿ, ಬಿಸಿಲಹಳ್ಳಿ ಗ್ರಾಮ ಲೆಕ್ಕಾಧಿಕಾರಿ ವೃತ್ತದಲ್ಲಿ ಬಿಸಿಲಹಳ್ಳಿ, ಬೀರಮಂಗಲ, ಕೊಂಡೇನಹಳ್ಳಿ.

ರಾಯಮಾಕಲಹಳ್ಳಿ, ದ್ವಾರಗಾನಹಳ್ಳಿ, ಗುವ್ವಲಹಳ್ಳಿ, ಚೆನ್ನ ಬೈರನಹಳ್ಳಿ (ಬೇಚರಾಕ್‌), ಹಳೇ ಹಳ್ಳಿ ಗ್ರಾಮಲೆಕ್ಕಾಧಿಕಾರಿ ವ್ಯಾಪ್ತಿಯಲ್ಲಿ ಹಳೇಹಳ್ಳಿ, ಕಡಾ ಚಿಕ್ಕನಹಳ್ಳಿ (ಮಜರೆ), ದೇವರಕೊಂಡಹಳ್ಳಿ (ಮಜರೆ), ಕುಲುಮೇನ ಹಳ್ಳಿ (ಮಜರೆ), ನಾಗರಬಾವಿ, ಗುಯ್ಯಲ ಹಳ್ಳಿ ಗ್ರಾಮ ಲೆಕ್ಕಾಧಿಕಾರಿ ವೃತ್ತದಲ್ಲಿ ಗುಯ್ಯಲಹಳ್ಳಿ, ಬಿಕ್ಕಲಹಳ್ಳಿ (ಮಜರೆ), ಕಾಮರೆಡ್ಡಿಹಳ್ಳಿ(ಮಜರೆ), ಅಲಸ್‌ ತಿಮ್ಮನ ಹಳ್ಳಿ, ಬುಡುಗ ತ್ತಿಮ್ಮನಹಳ್ಳಿ, ವಸಂತನ ಹಳ್ಳಿ (ಬೇಚರಾಕ್‌), ಉಪ್ಪಾರಹಳ್ಳಿ ಗ್ರಾಮ ಲೆಕ್ಕಾಧಿಕಾರಿ ವೃತ್ತದ ವ್ಯಾಪ್ತಿಯಲ್ಲಿ ಉಪ್ಪಾರಹಳ್ಳಿ, ಬಂದಾರ‌್ಲಹಳ್ಳಿ (ಮಜರೆ), ಚೀಲನಹಳ್ಳಿ, ಚಿನ್ನನಾಗೇನಹಳ್ಳಿ, ನೇರಳಹಳ್ಳಿ (ಬೇಚರಾಕ್‌), ಜರಬಂಡ ಹಳ್ಳಿ ಗ್ರಾಮ ಲೆಕ್ಕಾಧಿಕಾರಿ ವೃತ್ತದಲ್ಲಿ ಜರಬಂಡಹಳ್ಳಿ, ಬಾಲರೆಡ್ಡಿಹಳ್ಳಿ, ಕಂಬಾಲಹಳ್ಳಿ (ಮಜರೆ), ತೇಕಲಹಳ್ಳಿ, ಪಿಡಿಚಲಹಳ್ಳಿ, ಗೊಲ್ಲಹಳ್ಳಿ, ಗೊಂಡಿಹಳ್ಳಿ (ಬೇಚರಾಕ್‌), ನುಲುಗುಮ್ಮನ ಹಳ್ಳಿ, ಹನು ಮಂತಪುರ, ಭೂಮನಹಳ್ಳಿ, ದಿನ್ನೇನಹಳ್ಳಿ ಒಳಗೊಂಡಂತೆ ಗ್ರಾಮಗಳನ್ನು ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಮಂಚೇನಹಳ್ಳಿ ತಾಲೂಕು ವ್ಯಾಪ್ತಿಗೆ ಸೇರಿಸಲಾಗಿದೆ.

ಅಂದುಕೊಂಡಂತೆ ಚಿಕ್ಕಬಳ್ಳಾಪುರ ಜಿಲ್ಲೆಯ ಚೇಳೂರು ಮತ್ತು ಮಂಚೇನಹಳ್ಳಿ ಹೋಬಳಿಯನ್ನು ತಾಲೂಕು ಕೇಂದ್ರಗಳಾಗಿ ಘೋಷಣೆ ಮಾಡಿ ಸರ್ಕಾರ ಸಾರ್ವಜನಿಕರಿಂದ ಆಕ್ಷೇಪಣೆ ಹಾಗೂ ಸಲಹೆ ಸೂಚನೆಗಳನ್ನು ಸ್ವೀಕರಿಸಿ ಅಧಿಕೃತವಾಗಿ ಅಧಿಸೂಚನೆಯನ್ನು ಸಹ ಹೊರಡಿಸಿದೆ. ಆದರೆ, ಎರಡು ತಾಲೂಕುಗಳ ರಚನೆ ಸಂಬಂಧಿಸಿದಂತೆ ಕಟ್ಟಡಗಳ ನಿರ್ಮಾಣ ಮತ್ತು ಮೂಲ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ತ್ವರಿತವಾಗಿ ಕ್ರಮಕೈಗೊಂಡು ಅಗತ್ಯ ಅಭಿವೃದ್ಧಿಗಳನ್ನು ಮಾಡಬೇಕು ಎಂದು ಸ್ಥಳೀಯ ನಾಗರಿಕರ ಆಶಯವಾಗಿದೆ.

Advertisement

ತಾಲೂಕು ಕೇಂದ್ರ ಘೋಷಣೆ: ಅಭಿನಂದನೆ
ಸರ್ಕಾರವು ಮಂಚೇನಹಳ್ಳಿಯನ್ನು ತಾಲೂಕು ಕೇಂದ್ರವನ್ನಾಗಿ ಘೋಷಿಸಿ ಅಂತಿಮ ಸುತ್ತೋಲೆ ಹೊರಡಿಸಿದ್ದು, ಇದಕ್ಕಾಗಿ ಮಂಚೇನಹಳ್ಳಿಯ ಸಂಘಪರಿವಾರದ ಸಂಘಟನೆಗಳಾದ ವಿಶ್ವಹಿಂದು ಪರಿಷದ್‌, ಅಖೀಲ ಭಾರತ ವಿದ್ಯಾರ್ಥಿ ಪರಿಷದ್‌, ಹಿಂದೂ ಜಾಗರಣ ವೇದಿಕೆ ಹಾಗೂ ಶ್ರೀ ವಿಶ್ವೇಶ್ವರಯ್ಯ ಜಿಲ್ಲಾ ನಾಗರಿಕ ವೇದಿಕೆಯಿಂದ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವರು, ಸನ್ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರಿಗೆ ಹಾಗೂ ಕರ್ನಾಟಕ ಸರ್ಕಾರಕ್ಕೆ ಧನ್ಯವಾದಗಳನ್ನು ತಿಳಿಸುತ್ತೇವೆ ಎಂದು ವೇದಿಕೆ ಅಧ್ಯಕ್ಷ ಆನಂದ ತೀರ್ಥ ತಿಳಿಸಿದ್ದಾರೆ. ತಾಲೂಕಿಗೆ ಸಂಬಂಧಿಸಿದ ಮುಂದಿನ ಅಭಿವೃದ್ಧಿ ಕೆಲಸಗಳನ್ನು ಚುನಾವಣೆಯೊಳಗೆ
ಕೈಗೊಳ್ಳಲು ಮನವಿ ಮಾಡಿದ್ದಾರೆ.

ಜಿಲ್ಲೆಯ ಗೌರಿಬಿದನೂರು ತಾಲೂಕಿನ ಮಂಚೇನಹಳ್ಳಿ ಹೋಬಳಿಯನ್ನು ತಾಲೂಕು ಕೇಂದ್ರವಾಗಿ ಅಧಿಕೃತವಾಗಿ ಅಧಿಸೂಚನೆ ಹೊರಡಿಸಿರುವುದಕ್ಕೆ ಸಂತಸವಾಗಿದೆ. ಈ ನಿರ್ಧಾರ ಕೈಗೊಂಡಿರುವ ಸರ್ಕಾರವನ್ನು ಸ್ವಾಗತಿಸುತ್ತೇನೆ. ಜನರಿಗೆ ಅನುಕೂಲವಾಗುವ ದೃಷ್ಟಿಯಿಂದ ಅಸ್ತಿತ್ವಕ್ಕೆ ಬಂದಿರುವ ತಾಲೂಕು ಕೇಂದ್ರಕ್ಕೆ ಅಗತ್ಯ ಮೂಲ ಸೌಲಭ್ಯಗಳು ಅಧಿಕಾರಿಗಳ ನೇಮಕ, ಕಚೇರಿಗಳನ್ನು ನಿರ್ಮಾಣ ಮಾಡಿದಾಗ ಮಾತ್ರ ಆಡಳಿತ ವಿಕೇಂದ್ರೀಕರಣ ಸಾರ್ಥವಾಗುತ್ತದೆ.
ಎನ್‌.ಎಚ್‌.ಶಿವಶಂಕರರೆಡ್ಡಿ, ಶಾಸಕರು, ಗೌರಿಬಿದನೂರು ಕ್ಷೇತ್ರ

Advertisement

Udayavani is now on Telegram. Click here to join our channel and stay updated with the latest news.

Next