Advertisement

ಕುಣಿಗಲ್: ಬಾಲ್ಯ ವಿವಾಹವನ್ನು ತಡೆದ ಅಧಿಕಾರಿಗಳು

01:07 PM Jun 21, 2022 | Team Udayavani |

ಕುಣಿಗಲ್: ತುಮಕೂರು ತಾಲೂಕು ಹೆಬ್ಬೂರು ಹೋಬಳಿ ದೊಡ್ಡಯ್ಯನಕಟ್ಟೆ ಪಾಳ್ಯದಲ್ಲಿ ನಡೆಯುತ್ತಿದ್ದ ಬಾಲ್ಯ ವಿವಾಹವನ್ನು ಅಧಿಕಾರಿಗಳು  ಕಾರ್ಯಚರಣೆ ನಡೆಸಿ ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

ಹೆಬ್ಬೂರು ಹೋಬಳಿ ರಾಜಾಪುರ ಗ್ರಾಮದ ಯುವಕ ಕುಣಿಗಲ್ ಪಟ್ಟಣದ ವಾರ್ಡ್ ನಂ 1 ಬಿದನಗೆರೆ ಗ್ರಾಮದ ಯುವತಿಯೊಂದಿಗೆ ನಿಶ್ಚಿತವಾಗಿದ್ದ.

ತಾಲೂಕಿನ ಹೆಬ್ಬೂರು ಹೋಬಳಿ  ದೊಡ್ಡಯ್ಯನಕಟ್ಟೆ ಪಾಳ್ಯ ಗ್ರಾಮದ ಲಕ್ಷ್ಮಿವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಪ್ರಥಮ ಶಾಸ್ತ್ರ ಹಾಗೂ  ಬುಧವಾರ ಮುಹೂರ್ತ ಇಟ್ಟುಕೊಳ್ಳಲಾಗಿತ್ತು, ಯುವತಿಗೆ 17 ವರ್ಷ 2 ತಿಂಗಳಾಗಿದ್ದು ಯುವತಿಗೆ 18 ವರ್ಷ ತುಂಬದ ಹಿನ್ನೆಲೆಯಲ್ಲಿ ಬಾಲ್ಯ ವಿವಾಹವಾಗಿರುವ ಬಗ್ಗೆ ಸ್ಥಳೀಯರು ದೂರು ನೀಡಿದ್ದರು.

ನೀಡಿದ ದೂರಿನ ಅನ್ವಯ ಸಿಡಿಪಿಓ ಅನುಷಾ, ಪಿಎಸ್ಐ ಲಕ್ಷ್ಮಣ್ , ಬಾಲ್ಯ ವಿವಾಹವಾದರೆ ಕಾನೂನು ಪ್ರಕಾರ ಕಠಿಣ ಕ್ರಮಕ್ಕೆ ಒಳಪಡಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ ಅಧಿಕಾರಿಗಳು, ಬಳಿಕ ವಧು ಹಾಗೂ ವರನ ಪೋಷಕರಿಂದ ಮುಚ್ಚಳಿಕೆ ಬರೆಸಿಕೊಂಡು ವಿವಾಹವನ್ನು ತಡೆದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next