Advertisement

ಅಧಿಕಾರಿಗೆ ಶಾಸಕ ಶಿವನಗೌಡ ಆವಾಜ್‌

06:20 AM Nov 18, 2018 | Team Udayavani |

ರಾಯಚೂರು: ದೇವದುರ್ಗ ಕ್ಷೇತ್ರದ ಬಿಜೆಪಿ ಶಾಸಕ ಕೆ.ಶಿವನಗೌಡ ನಾಯಕ ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ನಾಗರಾಜ್‌ ಅವರಿಗೆ ಅವಾಚ್ಯ ಪದಗಳಿಂದ ನಿಂದಿಸಿರುವ ಆಡಿಯೋ ಕ್ಲಿಪ್‌ವೊಂದು ವೈರಲ್‌ ಆಗಿದೆ. 

Advertisement

ಶಾಸಕರ ವರ್ತನೆಗೆ ಮನನೊಂದ ಅ ಧಿಕಾರಿ ತಮ್ಮನ್ನು ಆ ಹುದ್ದೆಯಿಂದ ಬಿಡುಗಡೆ ಮಾಡುವಂತೆ ಜಿಲ್ಲಾ ಧಿಕಾರಿಗೆ ಮನವಿ ಸಲ್ಲಿಸಿದ್ದಾರೆ. ಅಂಗನವಾಡಿ ಕೇಂದ್ರಗಳಿಗೆ ಮೊಟ್ಟೆ ಸರಬರಾಜು ಮಾಡಲು ಟೆಂಡರ್‌ ಕರೆಯುವ ವಿಚಾರದಲ್ಲಿ ಶಾಸಕ ಶಿವನಗೌಡ ನಾಯಕ ಅ ಧಿಕಾರಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. 

ಅವ್ಯಾಚ್ಯ ಪದ ಬಳಸಿ ಏಕವಚನದಲ್ಲಿಯೇ ಅ ಧಿಕಾರಿಯನ್ನು ನಿಂದಿಸಿದ್ದಾರೆ. ಈಗ ಆ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಆದರೆ, ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಶಾಸಕ ಶಿವನಗೌಡ ನಾಯಕ, ಕಳೆದ ಆರು ತಿಂಗಳಿಂದ ಟೆಂಡರ್‌ ಕರೆಯುವಂತೆ ಹೇಳಿ ಸಾಕಾಗಿದೆ. ನನ್ನ ಕ್ಷೇತ್ರ ಅಪೌಷ್ಟಿಕತೆಯಿಂದ ಬಳಲುತ್ತಿದೆ. ಇಷ್ಟಾದರೂ ಅ ಧಿಕಾರಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ. ನಿಧಾನಕ್ಕೆ ಹೇಳಿದರೆ ಕೇಳದಿದ್ದಾಗ ಖಾರವಾಗಿಯೇ ಮಾತನಾಡಬೇಕಾಗುತ್ತದೆ. ಇಲ್ಲವಾದರೆ ಯಾವುದೇ ಕೆಲಸಗಳನ್ನು ಮಾಡುವುದಿಲ್ಲ ಎಂದು ತಮ್ಮ ನಡೆ ಸಮರ್ಥಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next